Advertisement
ಕಾಪು ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ 66ನ್ನು ಪ್ರವೇಶಿಸಿ, ಅಲ್ಲಿಂದ ಹೆದ್ದಾರಿ ರಸ್ತೆಯಿಂದ ಪೊಲಿಪುವಿಗೆ ತೆರಳಲು ನೂರಾರು ವರ್ಷಗಳಿಂದಲೂ ಸಂಪರ್ಕ ಜಂಕ್ಷನ್ವೊಂದಿತ್ತು. ಆದರೆ ಈ ಸಂಪರ್ಕ ಜಂಕ್ಷನ್ನಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಳೆ ಅಪೂರ್ಣ ಕಾಮಗಾರಿ ನಡೆದ ಪರಿಣಾಮ ದೊಡ್ಡ ಹೊಂಡವೊಂದು ಸೃಷ್ಟಿಯಾಗಿತ್ತು. ಜಲ್ಲಿ ಮತ್ತು ಡಾಮರು ಪೂರ್ಣ ಕಿತ್ತು ಹೋದ ಪರಿಣಾಮ ಸಂಚಾರಕ್ಕೆ ತೊಂದರೆಯುಂಟಾಗುತ್ತಿತ್ತು.
Related Articles
ಕಾಪು ಪೇಟೆಯಿಂದ ಪೊಲಿಪುವಿಗೆ ಹೋಗುವ ಜನತೆ, ಅಂಚೆ ಕಚೇರಿ, ಪುರಸಭೆ ಕಾರ್ಯಾಲಯ, ದೂರವಾಣಿ ಕಚೇರಿ, ಕಾಪು ರಾಜೀವ ಭವನ, ಸರಕಾರಿ ಹಾಸ್ಟೆಲ್, ರೈತ ಸಂಪರ್ಕ ಕೇಂದ್ರ ಸಹಿತ ವಿವಿಧ ಕಡೆಗಳಿಗೆ ಅಗತ್ಯ ಕೆಲಸಗಳಿಗಾಗಿ ತೆರಳುವ ಜನರಿಗೆ ಇದರಿಂದ ತೀವ್ರ ತೊಂದರೆಗಳುಂಟಾಗುತ್ತಿವೆ.
Advertisement
ಹಠಾತ್ ನಿರ್ಬಂಧದಿಂದ ಜನರಿಗೆ ತೊಂದರೆ ಕರಾವಳಿ ರಸ್ತೆಯೊಂದಿಗೆ ಸಂಪರ್ಕ ಹೊಂದಿರುವ ಪೊಲಿಪು ಜಂಕ್ಷನ್ ರಸ್ತೆಯನ್ನು ಯಾವುದೇ ಸೂಚನೆ ನೀಡದೇ ಹಠಾತ್ ಆಗಿ ಬಂದ್ ಮಾಡಿರುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಗಳಾಗುತ್ತಿವೆ. ಕಾಪು ಪೇಟೆಯಿಂದ ಜಂಕ್ಷನ್ ಮೂಲಕವಾಗಿ ಹೆದ್ದಾರಿಯನ್ನು ಪ್ರವೇಶಿಸುವ ವಾಹನ ಸವಾರರು ಸರ್ವಿಸ್ ರಸ್ತೆಗೆ ತೆರಳಲು ಸುತ್ತು ಬಳಸಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ಕಾಪುವಿನಿಂದ ಪೊಲಿಪುವಿಗೆ ಹೋಗುವ ಜನರು ಹೆದ್ದಾರಿ ನಡುವೆ ಗೊಂದಲ ಮತ್ತು ಗಲಿಬಿಲಿಗೆ ಒಳಗಾಗುವಂತಾಗಿದೆ. ಮಾತ್ರವಲ್ಲದೇ ಇಲ್ಲಿ ಯಾವುದೇ ಫಲಕವನ್ನೂ ಹಾಕದೇ ಇರುವುದರಿಂದ ಜನರಿಗೆ ಕಿರಿಕಿರಿಯುಂಟಾಗುತ್ತಿದೆ.– ವಿಜಯ ಕರ್ಕೇರ ಪೊಲಿಪು , ಸದಸ್ಯರು, ಕಾಪು ಪುರಸಭೆ