Advertisement

ಬೀದಿಬದಿ ವ್ಯಾಪಾರಿಗಳ ಅಂಗಡಿ ತೆರವು 

03:46 PM Aug 14, 2022 | Team Udayavani |

ಎಚ್‌.ಡಿ.ಕೋಟೆ: ಪಟ್ಟಣದ ಸರ್ಕಾರಿ ಬಸ್‌ನಿಲ್ದಾಣದಿಂದ ಗದ್ದಿಗೆ ವೃತ್ತದ ತನಕ ಬೀದಿ ಬದಿಯಲ್ಲಿರಿಸಿಕೊಂಡಿದ್ದ ಅಂಗಡಿಗಳನ್ನು ಪುರಸಭೆ ಸಿಬ್ಬಂದಿ ಶನಿವಾರ ಮುಂಜಾನೆ ತೆರವುಗೊಳಿಸಿದರು.

Advertisement

ಆ.15ರಂದು ದೇಶವ್ಯಾಪಿ ಆಚರಿಸುವ ಅಮೃತ ಮಹೋತ್ಸವ ಅಂಗವಾಗಿ ಎಚ್‌.ಡಿ.ಕೋಟೆ ಪಟ್ಟಣದಲ್ಲಿಯೂ ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ ನೆರವೇರಿಸಲು ತೀರ್ಮಾನಿಸಲಾಗಿತ್ತು, ಆ ದಿನ ಪಟ್ಟಣದ ಸರ್ಕಾರಿ ಬಸ್‌ನಿಲ್ದಾಣದಿಂದ ಗದ್ದಿಗೆ ವೃತ್ತದ ತನಕ ರಸ್ತೆ ಬದಿಗಳಲ್ಲಿ ತ್ರಿವರ್ಣ ಧ್ವಜ ಅಳವಡಿಸುವುದೇ ಅಲ್ಲದೆ ಬೀದಿ ಬದಿ ವ್ಯಾಪಾರಿಗಳನ್ನು 3 ದಿನಗಳ ಕಾಲ ತೆರವುಗೊಳಿಸಿ ಆ ಜಾಗದಲ್ಲಿ ಶುಚಿತ್ವ ಕಾಪಾಡಬೇಕೆಂದು ಶಾಸಕ ಅನಿಲ್‌ ಚಿಕ್ಕಮಾದು ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆಯೇ ಮುಖ್ಯಾಧಿಕಾರಿಗಳು ಬೀದಿ ಬದಿ ವ್ಯಾಪಾರಸ್ಥರು ಆ.15ರ ಕಾರ್ಯಕ್ರಮಕ್ಕೆ 3 ದಿನಗಳ ಮುಂಚಿತವಾಗಿ ಬೀದಿ ಬದಿ ಅಂಗಡಿಗಳನ್ನು ತೆರವುಗೊಳಿಸಿ ಪಟ್ಟಣದ ಸೌಂದರ್ಯ ಕಾಪಾಡಲು ಮತ್ತು ವಿನೂತನ ಮಾದರಿಯಲ್ಲಿ ದಿನಾಚರಣೆ ನೆರವೇರಿಸಲು ಸಹಕರಿಸುವಂತೆ ಬೀದಿ ಬದಿ ಅಂಗಡಿಗಳ ಮಾಲೀಕರಲ್ಲಿ ಮನವಿ ಮಾಡಿಕೊಂಡಿದ್ದರು. ರಾಷ್ಟ್ರದ ಹಬ್ಬ ಆಚರಣೆಗೆ ಬಹುಸಂಖ್ಯೆ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಸಹಕಾರ ನೀಡಿದರು.

ಆದರೆ ಹಲವು ಮಂದಿ ಅಂಗಡಿಗಳ ಬಾಗಿಲನ್ನೂ ತೆರೆಯದೇ ಅಂಗಡಿಗಳನ್ನು ತೆರವುಗೊಳಿಸಿದೇ ಹಿಂದೇಟು ಹಾಕಿದ್ದರು. ಅಂತಿಮವಾಗಿ ಮುಖ್ಯಾಧಿಕಾರಿ ಸುರೇಶ್‌ ನೇತೃತ್ವದಲ್ಲಿ ಪೌರಕಾರ್ಮಿಕರು ಮತ್ತು ಸಿಬ್ಬಂದಿ ತೆರವುಗೊಳಿಸದೇ ಇದ್ದ ಬೀದಿ ಬದಿ ಅಂಗಡಿಗಳನ್ನು ಖುದ್ದು ತಾವೆ ತೆರವುಗೊಳಿಸುವ ಮೂಲಕ ಪಟ್ಟಣದ ಸೌಂದರ್ಯ ಮತ್ತು ಸ್ವತಂತ್ರ ದಿನಾಚರಣೆಗೆ ಮುಂದಾದರು.

Advertisement

Udayavani is now on Telegram. Click here to join our channel and stay updated with the latest news.

Next