Advertisement

ಕೊಕ್ಕಡ: ಸೌತಡ್ಕ ದೇವಸ್ಥಾನ ಪರಿಸರದಲ್ಲಿ ಯುವಕರಿಂದ ಸ್ವಚ್ಛತೆ

11:55 PM Jun 04, 2018 | Team Udayavani |

ನೆಲ್ಯಾಡಿ: ಕೊಕ್ಕಡ ನಿವಾಸಿಗಳಾದ ಯುವಕರ ತಂಡವೊಂದು ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರೂ ಪರಿಸರ ಸಂರಕ್ಷಣೆಗಾಗಿ ತಮ್ಮ ಪರಿಸರದ ಉತ್ಸಾಹಿಗಳನ್ನು ಸೇರಿಸಿಕೊಂಡು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಿರ್ವಹಿಸಿದ್ದಾರೆ.

Advertisement

ಕೊಕ್ಕಡ ನಿವಾಸಿಗಳಾದ ಗುರುಕಿರಣ್‌ ಪಾಂಗಣ್ಣಾಯ, ಸ್ಕಂದಪ್ರಸಾದ್‌ ಶಬರಾಯ, ಶ್ರೇಯಸ್‌ ಶಬರಾಯ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಪರಿಸರ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಕೊಕ್ಕಡದ ತಮ್ಮ ಸಹಪಾಠಿ ಗೆಳೆಯರನ್ನು ಕೂಡಿಸಿಕೊಂಡು ಸೌತಡ್ಕ ಮಹಾಗಣಪತಿ ಕ್ಷೇತ್ರದ ಪರಿಸರದಲ್ಲಿ ಕಸಕಡ್ಡಿಗಳನ್ನು ತೆಗೆದು ಶುಚಿಗೊಳಿಸಿದರು.

ಕೊಕ್ಕಡ ಪರಿಸರದ ಅಭಿಷೇಕ್‌ ಸರಳಾಯ, ವಿಘ್ನೇಶ್‌ ಭಟ್‌, ನಿತಿನ್‌ ಭಟ್‌, ಆದಿತ್ಯ ಹೆಬ್ಟಾರ್‌, ಅಕ್ಷಯ ಹೆಬ್ಟಾರ್‌, ಆಕಾಶ್‌ ಕೃಷ್ಣ, ಶಿವರಾಮ್‌ ನೆಲ್ಲಿತ್ತಾಯ, ಕಾರ್ತಿಕ್‌ ಉಪ್ಪಾರ್ಣ, ಅಭಿಲಾಶ್‌ ಉಪ್ಪಾರ್ಣ, ಅನಂತೇಶ್‌ ಉಪ್ಪಾರ್ಣ ಮೊದಲಾದವರು ಕೈಜೋಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next