Advertisement

ಪ್ರಧಾನಮಂತ್ರಿ ಹುಟ್ಟುಹಬ್ಬ: ಶ್ರಮದಾನದ ಮೂಲಕ ಕಲ್ಯಾಣಿ‌ ಸ್ವಚ್ಛಗೊಳಿಸಿದ BJP ಕಾರ್ಯಕರ್ತರು

02:01 PM Sep 17, 2020 | keerthan |

ಚಿಕ್ಕಬಳ್ಳಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಚಿಕ್ಕಬಳ್ಳಾಪುರ ನಗರದ 15 ನೇ ವಾರ್ಡಿನ ಭಾರತಿನಗರದಲ್ಲಿ ಬಿಜೆಪಿ‌ ಕಾರ್ಯಕರ್ತರು ಶ್ರಮದಾನದ‌ ಮೂಲಕ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದರು.

Advertisement

ಬಿಜೆಪಿಯ ಮಾಜಿ ನಗರ ಅಧ್ಯಕ್ಷ ಮಂಜುನಾಥ (ಎಂ.ಎಲ್.ಎ) ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶ್ರಮದಾನದ‌ ಮೂಲಕ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು‌ ಆಚರಿಸಿದರು.

ಬಿಜೆಪಿಯ ಮಾಜಿ ನಗರ ಅಧ್ಯಕ್ಷ ಮಂಜುನಾಥ (ಎಂಎಲ್ಎ) ಮಾತನಾಡಿ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಸಹಾಯ‌ ಮಾಡಿದೆ ಎಂದರಲ್ಲದೆ ಚಿಕ್ಕಬಳ್ಳಾಪುರ ನಗರದ 15ನೇ ವಾರ್ಡಿನ ಅಭಿವೃದ್ಧಿಗಾಗಿ ಸಮಿತಿಯನ್ನು ರಚಿಸಲಾಗಿದೆ ಎಂದರು.

ಇದನ್ನೂ ಓದಿ: ಮ್ಯಾಕ್ಸ್ ವೆಲ್- ಕ್ಯಾರಿ ದ್ವಿಶತಕದ ಜೊತೆಯಾಟ: ಕಡೇ ಕದನದಲ್ಲಿ ಅಭೂತಪೂರ್ವ ಜಯ ಸಾಧಿಸಿದ ಆಸೀಸ್

Advertisement

ಇದನ್ನೂ ಓದಿ:  ಬಸವನಬಾಗೇವಾಡಿ ತಾಲೂಕಿನಲ್ಲಿ ಲಘು ಭೂಕಂಪ: ಮನೆಗಳಿಂದ ಹೊರ ಓಡಿದ ಜನರು

ಈ‌ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ನಗರದ 19ನೇ ವಾರ್ಡಿನ ನಗರಸಭಾ ಸದಸ್ಯ ಮಹಾಕಾಳಿ ಬಾಬು, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಭಿಲಾಷ್ ಗೌಡ, ಕಿರಣ್, ಮುಖಂಡರಾದ ಲಕ್ಷ್ಮೀನಾರಾಯಣಗುಪ್ತ‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next