Advertisement

ಆರ್‌ಎಸ್‌ಎಸ್‌ನಿಂದ ಸ್ವಚ್ಛತಾ ಕಾರ್ಯ

03:01 PM Dec 22, 2021 | Team Udayavani |

ಚಿಂಚೋಳಿ: ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ಸೇವಾ ಮಹಾ ದಿನ ಪ್ರಯುಕ್ತ ಸ್ವಯಂಸೇವಕರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸುತ್ತಮುತ್ತ ಸ್ವಚ್ಛತೆ ಕಾರ್ಯ ಕೈಗೊಂಡರು.

Advertisement

ಪಟ್ಟಣದ ಸರ್ಕಾರಿ ಆಸ್ಪತ್ರೆ ಗಾರ್ಡ್‌ನ್‌, ಆಕ್ಸಿಜನ್‌ ಕೇಂದ್ರದ ಹತ್ತಿರ ಮತ್ತು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹತ್ತಿರ, ಆಸ್ಪತ್ರೆ ಬಳಿಯ ಪ್ರಮುಖ ರಸ್ತೆಗಳಲ್ಲಿ ಬೆಳೆದು ನಿಂತಿದ್ದ ಹುಲ್ಲು ಕಿತ್ತು ಹಾಕಿದರು. ಆಸ್ಪತ್ರೆ ಸುತ್ತಮುತ್ತ ಬಿದ್ದಿದ್ದ ಹಳೆ ವಸ್ತುಗಳು, ಪ್ಲಾಸ್ಟಿಕ್‌ ಬಾಟಲಿ, ಬಳಸಿದ ಸೂಜಿ, ಇಂಜೆಕ್ಷನ್‌, ಕಾಗದದ ಡಬ್ಬಿಗಳನ್ನು ಗೂಡಿಸಿ, ಸುಟ್ಟು ಹಾಕಲಾಯಿತು.

ಸ್ವಯಂಸೇವಕ ರೇವಣಸಿದ್ಧಪ್ಪ ಮೋಘಾ, ಸೇವಾ ಪ್ರಮುಖ ಶ್ರೀನಿವಾಸ ಪಾಟೀಲ, ಶ್ರೀಹರಿ ಕಾಟಾಪುರ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಜಗದೀಶಸಿಂಗ್‌ ಠಾಕೂರ, ತಾಲೂಕು ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ, ಯುವ ಅಧ್ಯಕ್ಷ ಸತೀಶರೆಡ್ಡಿ ತಾಜಲಾಪುರ ಆಸ್ಪತ್ರೆ, ವೈದ್ಯರಾದ ಡಾ| ಸಂತೋಷಪಾಟೀಲ, ತಾಲೂಕು ಆರೋಗ್ಯಾಧಿಕಾರಿ ಡಾ| ಮಹಮ್ಮದ್‌ ಗಫಾರ್‌, ಅಹೆಮದ್‌, ಕೆ.ಎಂ. ಬಾರಿ, ಪ್ರೇಮಸಿಂಗ್‌ ಜಾಧವ, ಲಕ್ಷ್ಮಣ ಆವಂಟಿ, ಗಿರಿರಾಜ ನಾಟೀಕಾರ, ಅಲ್ಲಮಪ್ರಭು ಹುಲಿ, ಮಲ್ಲು ಕೊಡಂಬಲ, ಜುನೇದಖಾನ್‌ ಇನ್ನಿತರರು ಭಾಗವಹಿಸಿದ್ದರು. ಸೇವಾ ಮಹಾದಿನದ ಪ್ರಯುಕ್ತ ಬೂಟ್‌ ಪಾಲೀಷ್‌, ಹೇರ್‌ ಕಟಿಂಗ್‌, ಶೌಚಾಲಯ ಸ್ವಚ್ಛತೆ ಮಾಡುವ ಪುರಸಭೆ ಕಾರ್ಮಿಕರು, ಮಧ್ಯಪ್ರದೇಶದಿಂದ ಬಂದಿದ್ದ ಬೈಲಗಂಬರ್‌ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next