Advertisement

ಉಜಿರೆ ಬಸ್‌ ನಿಲ್ದಾಣ ಪರಿಸರ ಸ್ವಚ್ಛ 

01:26 PM Aug 23, 2018 | Team Udayavani |

ಬೆಳ್ತಂಗಡಿ: ಉಜಿರೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪರಿಸರದಲ್ಲಿದ್ದ ತ್ಯಾಜ್ಯ ರಾಶಿಯನ್ನು ವಿಲೇ ಮಾಡುವ ಕಾರ್ಯ ನಡೆದಿದೆ. ಬಸ್‌ ನಿಲ್ದಾಣದ ಪರಿಸರದಲ್ಲಿ ತ್ಯಾಜ್ಯ ರಾಶಿಯಿರುವ ಕುರಿತು ಉದಯವಾಣಿ ಸುದಿನ ಪಂ. ಆಡಳಿತದ ಗಮನಕ್ಕೆ ತಂದ ತತ್‌ಕ್ಷಣ ಸಂಬಂಧಪಟ್ಟ ಇಲಾಖೆಗೆ ಪಂ. ಸೂಚಿಸಿದ್ದು, ಇಲಾಖೆ ಪಂ.ನ ಸಹಕಾರದೊಂದಿಗೆ ವಿಲೇ ಕಾರ್ಯ ಮಾಡಿದೆ. ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಉಪಯೋಗಿಸಿದ ನೀರಿನ ಬಾಟಲಿ, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಹಾಕಲು ಸೂಕ್ತ ವ್ಯವಸ್ಥೆ ಮಾಡುವ ಭರವಸೆ ನೀಡಿದೆ.

Advertisement

ದಂಡ
ಉಜಿರೆಯಲ್ಲಿರುವ ಹೊಟೇಲ್‌ ಹಾಗೂ ವಸತಿಗೃಹಗಳ ಹಿಂಬದಿಯಲ್ಲಿ ತ್ಯಾಜ್ಯಗಳನ್ನು ರಾಶಿ ಹಾಕಿರುವ ಕುರಿತು ಗ್ರಾ.ಪಂ.ನಿಂದ ಇನ್ನೆರಡು ದಿನಗಳಲ್ಲಿ ಪರಿಶೀಲನೆ ನಡೆಸಲಾಗುವುದು. ತ್ಯಾಜ್ಯ ರಾಶಿ ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು. 
-ಗಾಯತ್ರಿ ಪಿ.
ಉಜಿರೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next