Advertisement

ಟಿಡಿಪಿ- ವೈಎಸ್ಆರ್ ಸಿಪಿ ಕಾರ್ಯಕರ್ತರ ನಡುವೆ ಹಿಂಸಾತ್ಮಕ ಘರ್ಷಣೆ

08:21 AM Dec 17, 2022 | Team Udayavani |

ಪಾಲ್ನಾಡು: ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್ಆರ್ ಸಿಪಿ ಮತ್ತು ವಿರೋಧ ಪಕ್ಷವಾದ ಟಿಡಿಪಿ ಕಾರ್ಯಕರ್ತರ ನಡುವೆ ಹಿಂಸಾತ್ಮಕ ಸಂಘರ್ಷ ನಡೆದ ಘಟನೆ ಶುಕ್ರವಾರ ರಾತ್ರಿ ಪಾಲ್ನಾಡು ಜಿಲ್ಲೆಯಲ್ಲಿ ನಡೆದಿದೆ.

Advertisement

ಘರ್ಷಣೆಯ ನಂತರ ನೆರೆದಿದ್ದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಘರ್ಷಣೆಯಲ್ಲಿ ತನ್ನ ಪಕ್ಷದ ಕಚೇರಿ ಮತ್ತು ಅದರ ಮುಖಂಡರ ವಾಹನಗಳಿಗೆ ಉಂಟಾದ ಹಾನಿಯನ್ನು ಟಿಡಿಪಿ ತೀವ್ರವಾಗಿ ಖಂಡಿಸಿದೆ.

ಸ್ಥಳೀಯ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರ ಸಹೋದರನು ವೈಎಸ್‌ಆರ್‌ಸಿಪಿ ಕಾರ್ಯಕರ್ತರು ವಿಧ್ವಂಸಕ ಕೃತ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ಪಕ್ಷದ ನಾಯಕರ ಕಾರುಗಳನ್ನು ಧ್ವಂಸಗೊಳಿಸಿದ್ದು, ಟಿಡಿಪಿ ಬೆಂಬಲಿಗರ ಒಡೆತನದ ಅಂಗಡಿಗಳಿಗೂ ಬೆಂಕಿ ಹಚ್ಚಲಾಗಿದೆ ಎಂದು ವೆಂಕಟರಾಮಿ ರೆಡ್ಡಿ ಆರೋಪಿಸಿದ್ದಾರೆ.

Advertisement

ಇದನ್ನೂ ಓದಿ:ಪ್ರೊ ಕಬಡ್ಡಿ: ಇಂದು ಜೈಪುರ್‌ ಫ್ಯಾಂಥರ್-ಪುನೇರಿ ಪಲ್ಟಾನ್‌ ನಡುವೆ ಫೈನಲ್‌

ಅಲ್ಲದೆ ಗಲಭೆಯ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಸುಮ್ಮನಿದ್ದರು, ಅಲ್ಲದೆ ವೈಎಸ್ಆರ್ ಸಿಪಿ ಕಾರ್ಯಕರ್ತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿದರು ಎಂದು ಅವರು ದೂರಿದ್ದಾರೆ.

“ಮಾಚರ್ಲ ಕ್ಷೇತ್ರದಲ್ಲಿ ವೈಸಿಪಿ ರೌಡಿಗಳು ಪೊಲೀಸರ ನೆರವಿನಿಂದ ಟಿಡಿಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದು ಘೋರ ಘಟನೆ. ಖರ್ಮ ರಾಜ್ಯಕ್ಕಾಗಿ ಕಾರ್ಯಕ್ರಮ ಆಯೋಜಿಸುತ್ತಿದ್ದ ಟಿಡಿಪಿ ಮೇಲೆ ವೈಸಿಪಿ ರೌಡಿಗಳು ದಾಳಿ ನಡೆಸಿರುವುದು ರಾಜ್ಯದಲ್ಲಿ ನಡೆಯುತ್ತಿರುವ ಅರಾಜಕತೆಯ ಆಡಳಿತಕ್ಕೆ ಸಾಕ್ಷಿಯಾಗಿದೆ” ಎಂದು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ. ಲೋಕೇಶ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next