Advertisement

ಹಣಕಾಸಿನ ವಿಚಾರವಾಗಿ ಜಗಳ : ಕತ್ತಿಯಿಂದ ಹೊಡೆದು ಕೊಲೆ!

04:37 PM Mar 29, 2021 | Team Udayavani |

ಪಿರಿಯಾಪಟ್ಟಣ: ಹಣಕಾಸಿನ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲ್ಲೂಕಿನ ಚೌಡೇನಹಳ್ಳಿ ಗ್ರಾಮದ ಬಳಿ ಸೋಮವಾರ ಬೆಳಗಿನ ಜಾವ ನಡೆದಿದೆ.

Advertisement

ಹ್ಯಾರೀಸ್ (52) ಕೊಲೆಯಾದ ವ್ಯಕ್ತಿ. ಈತ ಮೂಲತಃ ಮಡಿಕೇರಿ ತಾಲೂಕು ನಾಪೋಕ್ಲು ಬಳಿಯ ಕೊಟ್ಟಮುಡಿ ಗ್ರಾಮದ ನಿವಾಸಿಯಾಗಿದ್ದು, ಹಲವು ವರ್ಷಗಳ ಹಿಂದೆ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದ ನಿವಾಸಿ ಅಮೀದ್ ಎಂಬುವವರನ್ನು ತನ್ನ ಬಳಿ ಅಡಿಕೆ ಕೆಲಸ ಮಾಡಲು ಪಿರಿಯಾಪಟ್ಟಣಕ್ಕೆ ಕರೆತಂದು ಒಟ್ಟಿಗೆ ಸೇರಿ ಅಡಿಕೆ ವ್ಯವಹಾರ ನಡೆಸುತ್ತಿದ್ದರು.

ಹೀಗಿರುವಾಗ ಕಳೆದ ಒಂದು ವರ್ಷದಿಂದ ಅಮೀದ್ ಹ್ಯಾರೀಸ್ ನಿಂದ ದೂರವಾಗಿ ತಾಲ್ಲೂಕಿನ ಚೌಡೇನಹಳ್ಳಿ ಗ್ರಾಮದ ಬಳಿ ಅಡಿಕೆ ವ್ಯಾಪಾರ ನಡೆಸುತ್ತಿದ್ದರು. ಹ್ಯಾರೀಶ್ ಪಿರಿಯಾಪಟ್ಟಣ ಟೌನಿನ ಶ್ರೀ ಮಹದೇಶ್ವರ ಸ್ವಾಮಿ ರೈಸ್ ಮಿಲ್ ಆವರಣದಲ್ಲಿ ಬೇರೆಯಾಗಿ ಅಡಿಕೆ ವ್ಯವಹಾರ ನಡೆಸುತ್ತಿದ್ದರು.

ಹ್ಯಾರಿಸ್ ನಿನ್ನೆ ಕೇರಳಕ್ಕೆ ಹೋಗಿ ಬಂದು ವ್ಯವಹಾರದ ವಿಷಯವಾಗಿ ಚೌಡೇನಹಳ್ಳಿಯಲ್ಲಿ ಅಡಿಕೆ ಕೆಲಸ ಮಾಡುತ್ತಿದ್ದ ಅಮೀದ್ ಬಳಿ ಹೋಗಿದ್ದಾರೆ.  ವ್ಯಾಪಾರದಲ್ಲಿನ ಹಣಕಾಸಿನ ವಿಷಯದಲ್ಲಿ  ಇಬ್ಬರ ನಡುವೆ ಜಗಳವಾಗಿದ್ದು, ಅಮೀದ್,  ಹ್ಯಾರೀಸ್ ಗೆ ಕತ್ತಿಯಿಂದ ಹೊಡೆದು  ಕೊಲೆ ಮಾಡಿ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಹ್ಯಾರೀಸ್ ಮೃತ ದೇಹವನ್ನು ಕೊಡಗು ಜಿಲ್ಲೆಯ ಮಡಿಕೇರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಮೃತರ ಸಂಬಂಧಿಕರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next