Advertisement

ಲೋಕೋಪಯೋಗಿ ಇಲಾಖೆಗೆ 1 ಸಾವಿರ ಎಂಜಿನಿಯರ್‌ಗಳ ನೇಮಕ

04:48 PM Jun 09, 2020 | sudhir |

ಬಾಗಲಕೋಟೆ : ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಿಗೆ ಬಡ್ತಿ ನೀಡಲಾಗಿದ್ದು, ಸಧ್ಯ ಕಿರಿಯ ಎಂಜನಿಯರ್‌ಗಳ ಕೊರತೆ ಇದೆ. ಇದಕ್ಕಾಗಿ ಹೊಸದಾಗಿ ನೇಮಕ  ಮಾಡುವ ಉದ್ದೇಶ ಸರ್ಕಾರ ಹೊಂದಿತ್ತು. ಆದರೆ, ಕೆಲವರು ಕೋರ್ಟ್ ಮೊರೆ  ಹೋಗಿದ್ದು , ಎಂಜಿನಿಯರ್‌ಗಳ ಕೊರತೆ  ನೀಗಿಸಲು  ಸರ್ಕಾರ  1 ಸಾವಿರ  ತರಬೇತಿ ಎಂಜಿನಿಯರ್‌ಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಎಂಜಿನಿಯರ್‌ಗಳ ಬಡ್ತಿ ಕಾರ್ಯ ನಮ್ಮ  ಸರ್ಕಾರ ಮಾಡಿದೆ. ಇದರಿಂದ ಕಿರಿಯಎಂಜಿನಿಯರ್ ಹುದ್ದೆಗಳು ಖಾಲಿ ಇವೆ. ಈ ಕೊರತೆ ನೀಗಿಸಲು 700 ಜನ ಪದವಿ ಎಂಜನಿಯರ್‌ಗಳು, 300 ಜನ ಡಿಪ್ಲೋಮಾ ಪೂರ್ಣಗೊಳಿಸಿದ ಎಂಜಿನಿಯರ್‌ಗಳನ್ನು ಒಂದು ವರ್ಷದ ಅವಧಿಗೆ ತರಬೇತಿ ಎಂಜಿನಿಯರ್‌ಗಳೆಂದು ನೇಮಕ ಮಾಡಲಾಗುವುದು. ಅವರಿಗೆ ಸರ್ಕಾರ ಒಂದು ವರ್ಷದ ಅವಧಿಗೆ ಸೂಕ್ತ ಗೌರವಧನ ನೀಡಲಿದೆ. ಈ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.

28 ಸಾವಿರ ಕಿ.ಮೀ ರಸ್ತೆ ಮೇಲ್ದರ್ಜೆಗೆ :
ರಾಜ್ಯದ 18 ಸಾವಿರ ಕಿ.ಮೀ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ, 10 ಸಾವಿರ ಕಿ.ಮೀ ಜಿಲ್ಲಾ ಮುಖ್ಯ ರಸ್ತೆಗಳನ್ನು ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಈ ಕುರಿತು ರಾಜ್ಯದ 224 ವಿಧಾನಸಭೆ ಕ್ಷೇತ್ರಗಳ ರಸ್ತೆಗಳ ಸಮಗ್ರ ಮಾಹಿತಿ ವರದಿ ತರಿಸಲಾಗುತ್ತಿದೆ. ಈ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದರಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ರಾಜ್ಯದ ಗ್ರಾಮೀಣ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲ್ದರ್ಜೆಗೇರಿಸುವ ಕಾರ್ಯ ಕಳೆದ 10 ವರ್ಷಗಳಿಂದ ನಡೆದಿಲ್ಲ. ನಮ್ಮ ಸರ್ಕಾರ ಬಂದ  ಬಳಿಕ ಈ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next