Advertisement

ಕಾನೂನು ಬಾಹಿರ ಚಟುವಟಿಕೆ ವಿರುದ್ಧ ಕ್ರಮ ಕೈಗೊಳ್ಳಲು ನಾಗರಿಕರ ಆಗ್ರಹ

08:20 PM Jul 22, 2019 | mahesh |

ವಿಟ್ಲ: ಕೇಪು ಗ್ರಾಮ ವ್ಯಾಪ್ತಿಯ ಕಲ್ಲಂಗಳದಲ್ಲಿ ರಾತ್ರಿ ವೇಳೆ ವಾಹನದಲ್ಲಿ ಸಂಚರಿಸುವವರನ್ನು ತಡೆದು ಬೆದರಿಸಿ ಹಣ ಲಪಟಾಯಿಸುವುದು, ಸರಕಳ್ಳತನ ಇತ್ಯಾದಿ ಪ್ರಕರಣಗಳು ನಡೆದರೂ ಸಂಬಂಧಪಟ್ಟ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ. ಕೇರಳ ರಾಜ್ಯದ ವಾಹನಗಳಲ್ಲಿ ರಾತ್ರಿ ನಮ್ಮ ಸುತ್ತಮುತ್ತ ಓಡಾಡಿಕೊಂಡು ನಿರ್ಭೀತವಾಗಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ಆರೋಪಿಸಿದರು. ಕೇಪು ಗ್ರಾ.ಪಂ. ಸಭಾಭವನದಲ್ಲಿ ಶನಿವಾರ ಗ್ರಾ.ಪಂ. ಅಧ್ಯಕ್ಷ ತಾರಾನಾಥ ಆಳ್ವ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು.

Advertisement

ಲಿಖಿತ ದೂರು
ಕೇಪು ಬೀಟ್‌ ಪೊಲೀಸ್‌ ವೀರೇಶ್‌, ಯಾವುದೇ ಕ್ರಿಮಿನಲ್‌ ವಿಚಾರಕ್ಕೆ ಸಂಬಂಧಿಸಿ ಬೀಟ್‌ ಕರ್ತವ್ಯದ ಪೊಲೀಸ್‌ ಅಥವಾ ಪೊಲೀಸ್‌ ಠಾಣೆಗೆ ತತ್‌ಕ್ಷಣ ಮೌಖಿಕ ಮಾಹಿತಿ ನೀಡಿ, ಬಳಿಕ ಲಿಖೀತ ದೂರು ಸಲ್ಲಿಸಬೇಕು ಎಂದು ನಾಗರಿಕರ ಆರೋಪಕ್ಕೆ ಉತ್ತರಿಸಿದರು.

ನೋಡಲ್‌ ಅಧಿಕಾರಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಸುಧಾ ಜೋಶಿ ಮಾತನಾಡಿ, ಹೆತ್ತವರು ಮಕ್ಕಳ ಪ್ರತಿಯೊಂದು ಚಲನವಲನಗಳ ಬಗ್ಗೆ ಕಣ್ಗಾವಲು ಇಡಬೇಕು. ಹೆಣ್ಣುಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣವಾಗಲಿದೆ. ಮಹಿಳೆಯರಿಗೆ ಸಂಬಂಧಿಸಿ ಕೇಂದ್ರ ಸರಕಾರ ಜಾರಿ ತಂದಿರುವ ಯೋಜನೆಗಳ ಬಗ್ಗೆ ಸ್ಥಳೀಯ ಅಂಗನವಾಡಿಗಳಲ್ಲಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಕಂದಾಯ, ಆರೋಗ್ಯ, ಕೃಷಿ, ತೋಟಗಾರಿಕೆ, ಮೆಸ್ಕಾಂ, ಆರಕ್ಷಕ ಇಲಾಖೆ ಯವರು ಮಾಹಿತಿ ನೀಡಿದರು.

ಜಿ.ಪಂ. ಸದಸ್ಯೆ ಜಯಶ್ರೀ ಕೋಡಂದೂರು, ತಾ.ಪಂಚಾಯತ್‌ ಸದಸ್ಯೆ ಕವಿತಾ ಸುಬ್ಬ ನಾಯ್ಕ, ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ, ಸದಸ್ಯರಾದ ಮಾಲತಿ ಬಿ., ಕೇಶವ ಉಪಾಧ್ಯಾಯ ಮಣಿಮುಂಡ, ಸುಮಿತ್ರಾ ಮರಕ್ಕಿಣಿ, ಅಬ್ದುಲ್‌ ಕರೀಂ ಕುದ್ದುಪದವು, ರತ್ನಾ ಕಲ್ಲಂಗಳ, ನಿರಂಜನ ಕೆ., ದಿವ್ಯಾ ಮೈರ, ಶಶಿಕಲಾ ಖಂಡಿಗ, ರೇಖಾ ದೇವುಮೂಲೆ, ಹರೀಶ್‌ ನಾಯ್ಕ ಖಂಡಿಗ, ವಿಟuಲ ನಾಯ್ಕ ಕೋಪ್ರ, ಪುಷ್ಪಾಕರ ರೈ ಚೆಲ್ಲಡ್ಕ, ಲತಾ ಎ., ದಯಾನಂದ ಬೀಜದಡ್ಕ, ಪಿಡಿಒ ನಳಿನಿ, ಪಂಚಾಯತ್‌ ಸಿಬಂದಿ ಉಪಸ್ಥಿತರಿದ್ದರು.

ಕೃಷಿ ಸಹಾಯಧನ
ಕೇರಳ ಮಾದರಿಯಲ್ಲೇ ಕೃಷಿಕರಿಗೆ ಕೃಷಿ ಇಲಾಖೆಯ ಸಹಾಯಧನ ವಿತರಣೆಯಾಗಬೇಕು. ಪವರ್‌ಮ್ಯಾನ್‌ಗಳ ನಿರ್ಲಕ್ಷéದಿಂದ ಹಲವಾರು ಕಡೆ ವಿದ್ಯುತ್‌ ತಂತಿಗಳ ಮೇಲೆ ಮರಗಳ ಗೆಲ್ಲುಗಳು ಆವರಿಸಿ ಅಪಾಯ ತಂದೊಡ್ಡುವ ಬಗ್ಗೆ ಗಂಭೀರವಾಗಿ ಗಮನಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಉಕ್ಕುಡ ಉಪವಿಭಾಗಾಧಿಕಾರಿ ಸರಿಪಡಿಸುವ ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next