Advertisement

ಅಪಘಾತದಲ್ಲಿ ಚಿತ್ರರಂಗ ಕಾರ್ಮಿಕ ಸಾವು

12:45 AM Jun 02, 2019 | Team Udayavani |

ಬೆಂಗಳೂರು: ವೇಗವಾಗಿ ಬರುತ್ತಿದ್ದ ದ್ವಿಚಕ್ರ ವಾಹನ ಫ‌ುಟ್‌ಪಾತ್‌ ಅಂಚಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಜಾಲ ಸಂಚಾರ ಠಾಣೆ ವ್ಯಾಪ್ತಿಯ ಕೆ.ನಾರಾಯಣಪುರ ಜಂಕ್ಷನ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ.

Advertisement

ಎಚ್‌ಎಎಲ್‌ ನಿವಾಸಿ ದಿಗ್ವಿಜಯ್‌ (24) ಮೃತರು. ಯಲಹಂಕದ ರೈನಿಲ್‌ (24) ಮತ್ತು ಹತ್ತೂರು ಲೇಔಟ್‌ನ ಲಿಖೀತ್‌ (26) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂವರೂ ಸ್ನೇಹಿತರಾಗಿದ್ದು, ಚಿತ್ರರಂಗದ ಕಾರ್ಮಿಕರಾಗಿದ್ದಾರೆ. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ನಾಗವಾರ ಬಳಿಯ ಚಿತ್ರಮಂದಿರದಲ್ಲಿ ಸಿನಿಮಾ ನೋಡಿಕೊಂಡು ಒಂದೇ ಬೈಕ್‌ನಲ್ಲಿ ಮೂವರೂ ಕೆ.ನಾರಾಯಣಪುರ ಕಡೆ ಹೋಗುತ್ತಿದ್ದರು. ರೈನಿಲ್‌ ಬೈಕ್‌ ಚಾಲನೆ ಮಾಡುತ್ತಿದ್ದರೆ, ಇಬ್ಬರು ಹಿಂಬದಿ ಕುಳಿತಿದ್ದರು.

ಈ ವೇಳೆ ವೇಗವಾಗಿ ಬಂದ ರೈನಿಲ್‌, ಕೆ.ನಾರಾಯಣಪುರ ಜಂಕ್ಷನ್‌ನಲ್ಲಿ ಯುಟರ್ನ್ ಪಡೆಯುವಾಗ ನಿಯಂತ್ರಣ ಕಳೆದುಕೊಂಡು ಪಾದಚಾರಿ ಮಾರ್ಗದ ಅಂಚಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರೈನಿಲ್‌ ಮತ್ತು ಲಿಖೀತ್‌ ಎಡ ಭಾಗಕ್ಕೆ ಬಿದ್ದರೆ, ದಿಗ್ವಿಜಯ್‌ ಬಲಗಡೆ ಬಿದ್ದಿದ್ದಾನೆ. ಆ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಟ್ರಕ್‌ ದಿಗ್ವಿಜಯ್‌ ಮೇಲೆ ಹರಿದಿದ್ದು, ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸಂಚಾರ ಪೊಲೀಸರು ಹೇಳಿದರು.

ಬೈಕ್‌ ಚಾಲನೆ ವೇಳೆ ರೈನಿಲ್‌ ಹಾಗೂ ಹಿಂಬದಿ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ ಎಂಬುದು ತಿಳಿದು ಬಂದಿದೆ. ಘಟನೆ ಸಂಬಂಧ ಟ್ರಕ್‌ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next