Advertisement

ಪಿಸ್ತೂಲ್‌ ತೋರಿಸಿ ಸಿನಿಮೀಯ ರೀತಿ ದರೋಡೆ..!

11:56 AM Nov 30, 2021 | Team Udayavani |

ಬೆಂಗಳೂರು: ಕೋವಿಡ್‌ ಲಸಿಕೆ ನೀಡುವ ನೆಪದಲ್ಲಿ ವೈದ್ಯಾಧಿಕಾರಿಗಳ ಸೋಗಿನಲ್ಲಿ ಮನೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದ ಮಹಿಳೆಯರಿಗೆ ಪಿಸ್ತೂಲ್‌ ತೋರಿಸಿ ಸಿನಿಮೀಯ ರೀತಿಯಲ್ಲಿ ಸುಮಾರು 50 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ.

Advertisement

ಯಶವಂತಪುರ ಪೊಲೀಸ್‌ ಠಾಣೆ ವ್ಯಾಪ್ತಿಯಎಸ್‌ ಬಿಎಂ ಕಾಲೋನಿಯ ನಿವಾಸಿ ಸಂಪತ್‌ ಸಿಂಗ್‌ ಮನೆಯಲ್ಲಿ ಸೋಮವಾರ ಮಧ್ಯಾಹ್ನ 2.30ರ ವೇಳೆ ಈ ದರೋಡೆ ಪ್ರಕರಣ ನಡೆದಿದೆ. ಚಿನ್ನಾಭರಣಗಳೊಂದಿಗೆ ಬೈಕ್‌ನಲ್ಲಿ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದು ಪೊಲೀಸರು ಖದೀಮರಿಗಾಗಿ ಶೋಧನಾ ಕಾರ್ಯ ನಡೆಸಿದ್ದಾರೆ.

ಜತೆಗೆ ಅಕ್ಕಪಕ್ಕ ಮನೆಯ ಸಿಸಿ ಕ್ಯಾಮೆರಾಗಳ ತಪಾಸಣೆ ನಡೆಸಿದ್ದಾರೆ. ಸಂಪತ್‌ ಸಿಂಗ್‌ ಅವರಿಗೆ ಪರಿಚಯವಿರುವ ವ್ಯಕ್ತಿಗಳೇ ಈ ರೀತಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪತ್ನಿ ಹಾಗೂ ಸೊಸೆ ಇಬ್ಬರೂ ಮನೆಯಲ್ಲಿ ಬಿಟ್ಟು ಸಂಪತ್‌ ಸಿಂಗ್‌ ಎಂದಿನಂತೆ ಯಶವಂತಪುರದಲ್ಲಿ ಹಾರ್ಡ್‌ವೇರ್‌ ಅಂಗಡಿಗೆ ಬಂದಿದ್ದಾರೆ.

ವೈದ್ಯಕೀಯ ಸಿಬ್ಬಂದಿ ಸೋಗಿನಲ್ಲಿ ಬೈಕ್‌ ನಲ್ಲಿ ಬಂದ ದುಷ್ಕರ್ಮಿಗಳು ಕೋವಿಡ್‌ ವ್ಯಾಕ್ಸಿನ್‌ ನೀಡುವುದಾಗಿ ಹೇಳಿ ಮನೆಯ ಒಳ ಪ್ರವೇಶ ಮಾಡಿದ್ದಾರೆ. ಮನೆಯ ಒಳಗೆ ಪ್ರವೇಶಿಸಿ ಕೊರೊನಾ ಹೊಸ ವೈರಸ್‌ ಬಂದಿದ್ದು ಅದಕ್ಕೆ ಲಸಿಕೆ ಹಾಕಲು ಬಂದಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ;- ವಾರದ ಹಿಂದೆ ನಗರಕ್ಕೆ ಬಂದಿಳಿದವರ ಶೋಧ..!

Advertisement

ಆಗ, ಸಂಪಂತ್‌ಸಿಂಗ್‌ ಅವರ ಪತ್ನಿ ತಮ್ಮ ಪತಿಗೆ ಮೊಬೈಲ್‌ ಕರೆ ಮಾಡಲು ಮುಂದಾದಾಗ ಈ ವೇಳೆ ಇಬ್ಬರು ಆರೋಪಿಗಳ ಪೈಕಿ ಓರ್ವ ಮನೆಯ ಬಾಗಿಲು ಹಾಕಿದರೆ, ಮತ್ತೋರ್ವ ಪಿಸ್ತೂಲ್‌ ಹಣೆಗೆ ಇಟ್ಟು ಚಿನ್ನಾಭರಣ ಕೊಡುವಂತೆ ಬೆದರಿಸಿದ. ಆತಂಕಗೊಂಡ ಸಂಪತ್‌ ಸಿಂಗ್‌ ಪತ್ನಿ ಮನೆಯಲ್ಲಿದ್ದ 50 ಗ್ರಾಂ ಚಿನ್ನಾಭರಣ ದರೋಡೆ ಕೋರರ ಕೈಗೆ ನೀಡಿದರು.

ಚಿನ್ನದ ಸರ ಕೈ ಸೇರುತ್ತಿದ್ದಂತೆ ಆರೋಪಿಗಳು ಬೈಕ್‌ ಏರಿ ಪರಾರಿಯಾಗಿದ್ದಾರೆ. ಕೂಡಲೇ ಸಂಪತ್‌ ಸಿಂಗ್‌ ಯಶವಂತಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆ ಆಸು-ಪಾಸಿ ನಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿ ಶೋಧ ನಡೆಸುತ್ತಿದ್ದು ಆರೋಪಿಗಳ ಪತ್ತೆ ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next