Advertisement

Hubli; ಅಂಜಲಿ ನಿವಾಸದಲ್ಲಿ ಸಿಐಡಿ ತಂಡದಿಂದ ಸ್ಥಳ ಮಹಜರು

04:23 PM May 24, 2024 | Team Udayavani |

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಆರೋಪಿ ಗಿರೀಶನನ್ನು ವಶಕ್ಕೆ ಪಡೆದಿರುವ ಸಿಐಡಿ ತಂಡ, ಶುಕ್ರವಾರ ಸ್ಥಳ ಮಹಜರು ನಡೆಸಿದೆ.

Advertisement

ಶುಕ್ರವಾರ‌ ಹಂತಕ ಗಿರೀಶನನ್ನು ವೀರಾಪುರ ಓಣಿಯಲ್ಲಿರುವ ಅಂಜಲಿ ‌ನಿವಾಸಕ್ಕೆ ಕರದ್ಯೊಯ್ದು ಹತ್ಯೆ ನಡೆಸಿದ ಸ್ಥಳ ಹಾಗೂ ಹತ್ಯೆಗೆ ಬಳಸಿದ ಚಾಕು ಹುಡುಕುವ ಕಾರ್ಯ ಮಾಡಿದರು.

ಚಾಕು ಇಲ್ಲಿಯೇ ಬಿಸಾಡಿದ್ದಾಗಿ ಹಂತಕ ಹೇಳಿಕೆ ಹಿನ್ನೆಲೆಯಲ್ಲಿ ಲೋಹ ಪತ್ತೆ ಯಂತ್ರ ಬಳಸಿ ಹುಡುಕಾಡಿದರೂ ಚಾಕು ಸಿಗಲಿಲ್ಲ.

ಸ್ಥಳ ಮಹಜರಿಗೆಂದು ಹಂತಕನನ್ನು‌ ಅಂಜಲಿ‌ ಮನೆಗೆ ಕರೆತರುತ್ತಿಂದಂತೆಯೇ ಅಂಜಲಿ ಸಹೋದರಿ ಮತ್ತು ಸ್ಥಳೀಯರು ಗಿರೀಶ ವಿರುದ್ಧ ಆಕ್ರೋಶ ಹೊರಹಾಕಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಸಿಐಡಿ ಅಧಿಕಾರಿಗಳು ಆಕ್ರೋಶ ಗೊಂಡವರನ್ನು ಸಮಾಧಾನ ಪಡಿಸಿದರು.

ಅಂಜಲಿ ಹತ್ಯೆ ನಂತರ ಗಿರೀಶ್ ಇಲ್ಲಿನ ಗೋಕುಲ ಬಸ್ ನಿಲ್ದಾಣ ಹೋಗಿದ್ದ ಹಿನ್ನೆಲೆಯಲ್ಲಿ ಗಿರೀಶನನ್ನು ಬಸ್ ನಿಲ್ದಾಣಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next