Advertisement

Udupi ಬಿಷಪರಿಂದ ಕ್ರಿಸ್‌ಮಸ್‌ ಸಂದೇಶ: ಬೆಳಕು ನಮ್ಮಲ್ಲಿರುವ ಶಾಶ್ವತ ಕತ್ತಲನ್ನು ದೂರಮಾಡಲಿ

10:13 PM Dec 23, 2023 | Team Udayavani |

ಉಡುಪಿ: ಕ್ರಿಸ್ತ ಜಯಂತಿಯ ಆಚರಣೆಯಲ್ಲಿ ನಾವು ಬೆಳಕಿಗೆ, ದೀಪಾಲಂಕಾರಕ್ಕೆ ಮಹತ್ವ ಕೊಡುತ್ತೇವೆ. ಗೋದಲಿ, ಕ್ರಿಸ್‌ಮಸ್‌ ಟ್ರೀ, ನಕ್ಷತ್ರದಲ್ಲಿ ಬೆಳಗಿದ ಬೆಳಕು ಕತ್ತಲೆಯನ್ನು ಹೋಗಲಾಡಿಸಿ ನಮ್ಮ ಮನಸ್ಸಿಗೆ ಮುದವನ್ನು ನೀಡುತ್ತದೆ. ಈ ಬೆಳಕಿನ ಹಬ್ಬ ದೀಪಾವಳಿಯಂತೆ ಕೆಲವೇ ದಿನಗಳಿಗೆ ಸೀಮಿತವಾಗಿದ್ದು ಆನಂತರ ಪುನಃ ಕತ್ತಲು ಆವರಿಸುತ್ತದೆ.

Advertisement

ಬೆಳಕು ಬೇಕು ಎಂದಾಗಲೆಲ್ಲ ನಾವು ದೀಪವನ್ನು ಹೊತ್ತಿಸಿ ಕತ್ತಲೆಯನ್ನು ಹೋಗಲಾಡಿಸಬೇಕಾಗಿದೆ. ದೇವರಿಂದ ಹೊರಹೊಮ್ಮಿದ ನಿಜ ಬೆಳಕು ಮಾತ್ರ ಈ ಕತ್ತಲೆಯನ್ನು ಹೋಗಲಾಡಿಸಬಲ್ಲದು. ಇದು ಆಧ್ಯಾತ್ಮಿಕ ಜ್ಯೋತಿ. “ಕತ್ತಲಿನಲ್ಲಿ ಸಂಚರಿಸುತ್ತಿದ್ದ ಜನರಿಗೆ ಒಂದು ಮಹಾಜ್ಯೋತಿ ಕಾಣಿಸಿತು. ಮರಣದ ನೆರಳಿನಲ್ಲಿ ನೆಲೆಸಿದ ನಾಡಿನಲ್ಲಿ ಆ ಜ್ಯೋತಿ ಪ್ರಜ್ವಲಿಸಿತು’ (ಯೆಶಾಯಾ 9:2). ಈ ದೀರ್ಘ‌ ದರ್ಶನ ದೇಹಾಂಬರವಾಗಿ ಈ ಲೋಕದಲ್ಲಿ ಜನ್ಮತಳೆದು ಪ್ರಭು ಕ್ರಿಸ್ತರಲ್ಲಿ ಪ್ರತ್ಯಕ್ಷವಾಯಿತು. “ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ. ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ’ (ಯೋವಾ 8:12) “ಜಗತ್ತಿನಲ್ಲಿ ನಾನಿರುವಾಗ ಜಗದ ಜ್ಯೋತಿ ನಾನೇ’ ಎಂದರು ಪ್ರಭು ಯೇಸು.

ಮಾನವರೆಲ್ಲರನ್ನು ಬೆಳಗಿಸಲು ಈ ಲೋಕಕ್ಕೆ ಆಗಮಿಸಿದ ಬೆತ್ಲೆಮಿನ ಬಾಲ ಯೇಸು ನಮ್ಮ ಮಾನಸಿಕ ಮತ್ತು ಆತ್ಮಿಕ ಅಂಧಕಾರವನ್ನು ನೀಗಿಸಿ ನಮ್ಮನ್ನು ಸತ್ಯಮಾರ್ಗದಲ್ಲಿ ನಡೆಸಲಿ. ಇದೇ ಕ್ರಿಸ್ತ ಜಯಂತಿಯ ಶುಭಾಶಯಗಳು ಮತ್ತು ಹೊಸ ವರ್ಷದ ಹಾರೈಕೆಗಳು.
– ಡಾ| ಜೆರಾಲ್ಡ್ ಐಸಾಕ್‌ ಲೋಬೊ, ಧರ್ಮಾಧ್ಯಕ್ಷರು, ಉಡುಪಿ ಧರ್ಮಪ್ರಾಂತ

Advertisement

Udayavani is now on Telegram. Click here to join our channel and stay updated with the latest news.

Next