Advertisement
ಕೋಟ ಮೂರುಕೈ, ಮಧುವನ ಮುಂತಾದ ಪರಿಸರದಲ್ಲಿ ಅಡ್ಡಾಡುತ್ತಿದ್ದ ಈ ಯುವಕನನ್ನು ಮಧುವನದ ನಿವಾಸಿ ಗುತ್ತಿಗೆದಾರ ಅಬ್ದುಲ್ ಅಮೀರ್ ಎಂಬವರು ಮಾನವೀಯ ನೆಲೆಯಲ್ಲಿ ತಮ್ಮ ಮನೆಗೆ ಕರೆದೊಯ್ದು, ಸ್ನಾನ ಮಾಡಿಸಿ, ಬಟ್ಟೆಗಳನ್ನು ನೀಡಿ ಪೂರ್ವಾಪರ ವಿಚಾರಿಸಿದ್ದರು. ಆಗ ಆತ, ತನ್ನ ಹೆಸರು ಪುರಂ ದಾಸ್. ತಾನು ಝಾರ್ಖಂಡ್ನ ಮುರುಗಮs… ನಿವಾಸಿ ಎಂದು ತಿಳಿಸಿದ್ದಾನೆ. ಈತನನ್ನು ಕೋಟ ಠಾಣೆಗೆ ಕರೆದೊಯ್ದ ಅಬ್ದುಲ್ಅವರು, ಪೊಲೀಸರಿಗೆ ಮಾಹಿತಿ ನೀಡಿದರು. ಉಪನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ ಅವರು ದೂರವಾಣಿ ಮೂಲಕ ಝಾರ್ಖಂಡ್ನ ಮುರು ಗಾಮs… ಠಾಣೆ ಪೊಲೀಸರನ್ನು ಸಂಪರ್ಕಿಸಿ, ಈತನ ಪೂರ್ವಾಪರ ವಿಚಾರಿಸಿದ್ದರು. ಆತ ಪತ್ನಿಯೊಂದಿಗೆ ಜಗಳವಾಡಿ ಮನೆ ಬಿಟ್ಟು ಬಂದಿದ್ದ. ಕೆಲವು ಸಮಯ ಮುಂಬಯಿಯಲ್ಲಿ ಕೆಲಸ ಮಾಡಿದ್ದ. ಕೆಲವು ತಿಂಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿ ಊರೂರು ಅಡ್ಡಾಡುತ್ತ ಕೋಟಕ್ಕೆಬಂದಿದ್ದ ಎನ್ನುವುದು ತಿಳಿದು ಬಂತು.
Advertisement
ಚೌತಿಯಂದೇ ಮರಳಿ ಮನೆ ಸೇರಿದ ಝಾರ್ಖಂಡ್ ಮೂಲದ ಮಾನಸಿಕ ಅಸ್ವಸ್ಥ
11:00 AM Aug 27, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.