Advertisement

ಚೌಕಿದಾರ್‌ ಚೋರ್‌ ಹೈ ಹೇಳಿಕೆ : ರಾಹುಲ್‌ಗೆ ಮುಖಭಂಗ

02:11 AM Apr 23, 2019 | sudhir |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣ ರ್ಯಾಲಿಗಳಲ್ಲಿ ಮಾತನಾಡು ವಾಗ ಚೌಕಿ ದಾರ್‌ ಚೋರ್‌ ಹೈ (ಕಾವಲುಗಾರ ಕಳ್ಳ) ಎಂದು ಸುಪ್ರೀಂ ಕೋರ್ಟ್‌ ಹೇಳಿದೆ ಎನ್ನುತ್ತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ಭಾರೀ ಮುಖಭಂಗವಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಅಫಿದವಿತ್‌ ಸಲ್ಲಿಸಿದ ರಾಹುಲ್‌ ಈ ಹೇಳಿಕೆಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

Advertisement

ಅಷ್ಟೇ ಅಲ್ಲ, ಚುನಾವಣೆ ಭಾಷಣಗಳಲ್ಲಿ ಇಂತಹ ಹೇಳಿಕೆಯನ್ನು ಪುನರಾವರ್ತಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ಈ ಶಬ್ದವನ್ನು ಬಳಸಿಲ್ಲ. ಚುನಾವಣ ಪ್ರಚಾರ ನಡೆಸುವ ಭರದಲ್ಲಿ ಈ ಹೇಳಿಕೆ ಹೊರಬಂದಿದೆ ಎಂದು ರಾಹುಲ್‌ ತಪ್ಪೊಪ್ಪಿಕೊಂಡಿದ್ದಾರೆ. ಬಿಜೆಪಿ ನಾಯಕಿ ಮೀನಾಕ್ಷಿ ಲೇಖೀ ರಾಹುಲ್‌ ವಿರುದ್ಧ ದೂರು ಸಲ್ಲಿಸಿದ್ದರು. ಅಲ್ಲದೆ, ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಕೋರ್ಟ್‌ ತೀರ್ಪಿನಲ್ಲಿ ಚೌಕಿದಾರ ಚೋರ್‌ ಎಂಬುದಾಗಿ ಉಲ್ಲೇಖೀಸಿಲ್ಲ ಎಂದಿತ್ತು.

ಈ ಬಗ್ಗೆ ಮಾತನಾಡಿದ ಲೇಖೀ, ಇದು ರಾಹುಲ್‌ರ ತಪ್ಪೊಪ್ಪಿಗೆ. ಅಷ್ಟೇ ಅಲ್ಲ, ನ್ಯಾಯಾಲಯದ ಹಾಗೂ ನ್ಯಾಯಾಧೀಶರ ಘನತೆಯನ್ನು ಕುಗ್ಗಿಸಲು ರಾಹುಲ್‌ ನಡೆಸಿದ ಕೃತ್ಯ ಇದು. ಈ ಹೇಳಿಕೆ ನ್ಯಾಯಾಂಗ ನಿಂದನೆಯೂ ಆಗಿದೆ ಎಂದು ಹೇಳಿದ್ದಾರೆ.

ಮತ್ತೆ ಚೌಕಿದಾರ್‌ ಚೋರ್‌ ಎಂದ ರಾಹುಲ್‌!
ಒಂದೆಡೆ ಚೌಕಿದಾರ್‌ ಚೋರ್‌ ಎಂಬುದಾಗಿ ಸುಪ್ರೀಂ ಕೋರ್ಟ್‌ ಹೇಳಿಲ್ಲ ಎಂಬುದಾಗಿ ಅಫಿದವಿತ್‌ ಸಲ್ಲಿಸುತ್ತಿದ್ದಂತೆಯೇ ಟ್ವೀಟ್‌ ಮಾಡಿದ ರಾಹುಲ್‌, ಕಮಲದ ಬ್ರಾಂಡ್‌ನ‌ ಚೌಕಿದಾರ ಕಳ್ಳನೇ ಹೌದು ಎಂಬುದನ್ನು ಮೇ 23ರಂದು ಜನರ ನ್ಯಾಯಾಲಯ ನಿರ್ಧರಿಸುತ್ತದೆ. ಅಂದು ನ್ಯಾಯ ಸಿಗುತ್ತದೆ. ಬಡವರಿಂದ ಲೂಟಿ ಮಾಡಿ ತನ್ನ ಶ್ರೀಮಂತ ಸ್ನೇಹಿತರಿಗೆ ಲಾಭ ಮಾಡಿಕೊಟ್ಟ ಚೌಕಿದಾರನಿಗೆ ಶಿಕ್ಷೆ ಕೊಡುತ್ತದೆ ಎಂದಿದ್ದಾರೆ.

ರಾಹುಲ್‌ ಕ್ಷಮೆ ಕೇಳಲಿ
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ, ರಾಹುಲ್‌ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ. ರಾಹುಲ್‌ ಮೊದಲ ಕ್ರಮಾಂಕದ ಸುಳ್ಳುಗಾರ. ರಫೇಲ್‌ ಒಪ್ಪಂದದಲ್ಲಿ ಮೋದಿ ವಿರುದ್ಧ ನಾನು ಸುಳ್ಳು ಹೇಳಿದ್ದೇನೆ ಎಂಬುದನ್ನು ರಾಹುಲ್‌ ಈಗ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಬಿಜೆಪಿ ವಕ್ತಾರ ನರಸಿಂಹರಾವ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next