Advertisement

ಕಾಗಿಣಾ ನೀರು ತಡೆ ಹಿಡಿದಿದ್ದೇ ಕಾಲರಾಕ್ಕೆ ಕಾರಣ

01:07 PM May 14, 2022 | Team Udayavani |

ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಾಲರಾ ರೋಗ ಉಲ್ಬಣಗೊಳ್ಳಲು ಗ್ರಾಮದ ಬಳಿ ಕಾಗಿಣಾ ನದಿ ನೀರನ್ನು ಮೂರ್‍ನಾಲ್ಕು ತಿಂಗಳಿಂದ ತಡೆಹಿಡಿದಿದ್ದೇ ಕಾರಣವಾಗಿದೆ ಎಂದು ಸಮಾಜ ಸೇವಕ ಮಣಿಕಂಠ ರಾಠೊಡ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿದ್ದು, ಶಾಸಕ ಪ್ರಿಯಾಂಕ್‌ ಖರ್ಗೆ ಈ ಕುರಿತಂತೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದಂಡೋತಿ ಗ್ರಾಮದಲ್ಲಿ ವಾಂತಿ ಭೇದಿಗೆ 74ಕ್ಕೂ ಹೆಚ್ಚು ಜನರು ತುತ್ತಾಗಿ ನರಳುತ್ತಿದ್ದಾರೆ. ತಡೆ ಹಿಡಿದ ನದಿ ನೀರು ದಂಡೋತಿ ಗ್ರಾಮಕ್ಕೆ ಪೂರೈಕೆಯಾಗುತ್ತಿದೆ. ಈ ಅಶುದ್ಧ ನೀರು ಉಪಯೋಗಿಸಿದ್ದರಿಂದ ಗ್ರಾಮಸ್ಥರಲ್ಲಿ ವಾಂತಿ ಭೇದಿ ಕಾಣಿಸಿಕೊಳ್ಳಲು ಕಾರಣವಾಗಿದೆ. ಆದ್ದರಿಂದ ಶುದ್ಧ ನೀರು ಸರಬರಾಜು ಮಾಡಬೇಕು ಒತ್ತಾಯಿಸಿದರು.

ಪುರಸಭೆ ಸದಸ್ಯ ರಮೇಶ ಬೊಮ್ಮನಳ್ಳಿ, ಮುಖಂಡರಾದ ಅಶ್ವತ್ಥ್ ರಾಠೊಡ, ಮಹ್ಮದ್‌ ಯುನೂಸ್‌, ಶ್ರೀಕಾಂತ ಸುಲೇಗಾಂವ, ಮಲ್ಲಿಕಾರ್ಜುನ ಹೂಗಾರ, ಸಂಗಮೇಶ ರೋಣದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next