Advertisement

Chittoor: ಆಕಸ್ಮಿಕವಾಗಿ ಹೊಳೆಗೆ ಬಿದ್ದು ವ್ಯಕ್ತಿ ಸಾವು

10:23 PM Aug 08, 2023 | Team Udayavani |

ಕೊಲ್ಲೂರು: ಚಿತ್ತೂರು ಗ್ರಾಮದ ಮುಟ್ಟೋಣಿ ಎಂಬಲ್ಲಿನ ನಿವಾಸಿಯೋರ್ವರು ಆ. 7ರಂದು ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.

Advertisement

ಪ್ರಭಾಕರ ಶೆಟ್ಟಿ (60) ಮೃತಪಟ್ಟವರು. ಚಕ್ರಾ ನದಿ ಸೇರುವ ಹೊಳೆಯ ಸಾಲಿನಲ್ಲಿ ಅಳವಡಿಸಲಾದ ಪಂಪ್‌ಸೆಟ್‌ ಮೇಲೆತ್ತಲು ಹೋದಾಗ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಅಸ್ವಸ್ಥಗೊಂಡರು.

ತತ್‌ಕ್ಷಣ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next