Advertisement

Vandse ಚಿತ್ತೂರು: 54 ಅಡಿಕೆ ಗಿಡ ಧ್ವಂಸ

11:04 PM Oct 29, 2023 | Team Udayavani |

ವಂಡ್ಸೆ: ಚಿತ್ತೂರು ಗ್ರಾಮದ ಕೆಳಮನೆಯಲ್ಲಿ ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿದ ಕೆಲವರು 54 ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದು, 1 ಲಕ್ಷ ರೂ. ಮಿಕ್ಕಿ ನಷ್ಟ ಉಂಟಾಗಿರುವುದಾಗಿ ಸಂಜೀವ ಎಂಬವರು ಕೊಲ್ಲೂರು ಠಾಣೆಗೆ ದೂರು ನೀಡಿರುತ್ತಾರೆ.

Advertisement

ಸಂಜೀವ ಅವರು ಪುತ್ರಿ ಶ್ಯಾಮಲಾ ಜತೆಗೆ ಅಡಿಕೆ ತೋಟಕ್ಕೆ ತೆರಳಿದಾಗ ಅಡಿಕೆ ಗಿಡಗಳು ಧ್ವಂಸಗೊಂಡಿರುವುದು ಕಂಡುಬಂದಿದೆ.

ದೂರುದಾರರ ಪತ್ನಿಯ ಅಣ್ಣ ರಾಜೀವ, ಅವರ ಪತ್ನಿ ರುದ್ರಮ್ಮ ಹಾಗೂ ಇತರರು ಈ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.

ದೂರುದಾರರು ಹಾಗೂ ಆರೋಪಿಗಳ ನಡುವೆ ಜಾಗದ ತಕರಾರಿದ್ದು, ಅದೇ ದ್ವೇಷದಿಂದ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಕೊಲ್ಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next