Advertisement

ಚಳಿಯಿಂದ ತತ್ತರಿಸಿದ ಚಿತ್ತಾಪುರ

11:10 AM Dec 20, 2018 | Team Udayavani |

ಚಿತ್ತಾಪುರ: ಬಿಸಿಲ ನಾಡು ಎಂದೇ ಖ್ಯಾತಿ ಪಡೆದ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನದಿಂದ ಮೋಡ ಕವಿದ ವಾತಾವರಣ ಹಾಗೂ ಶೀತ ಗಾಳಿ, ಮಂಜಿನ ಮುಸುಕಿನಿಂದ ಜನತೆ ನಡುಗುತ್ತಿದ್ದಾರೆ.

Advertisement

ಮುಂಜಾನೆ ನಸುಕಿನ ಜಾವದಲ್ಲಿ ಸೂರ್ಯ ಬರಲು ತಡವಾಗುತ್ತಿದ್ದು, ಬಿಸಿಲನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಒಂದೆಡೆಯಾದರೆ, ಮಂಜು ಕವಿದ ವಾತಾವರಣದಿಂದ ವಾಹನ ಸವಾರರು ಬೆಳಕಾದರೂ ದೀಪ ಹಾಕಿಕೊಂಡು ಹೋಗುವ ಸಾಮಾನ್ಯ ದೃಶ್ಯಗಳು ಕಂಡು ಬರುತ್ತಿವೆ.

ಮುಂಜಾನೆ ವಾಯು ವಿಹಾರಕ್ಕೆ ಹೋಗುವವರಂತೂ ಮೈ ಕೊರೆಯುವ ಚಳಿಯಿಂದ ಮನೆ ಬಿಟ್ಟು ಹೊರಗೆ ಹೋಗುತ್ತಿಲ್ಲ. ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸ್ವೆಟರ್‌, ಟೋಪಿ, ಜಾಕೀಟ್‌ಗಳಿಲ್ಲದೇ ಬರುತ್ತಿಲ್ಲ. ಶಾಲೆಯ ಕೋಣೆಯಲ್ಲಿ ಕುಳಿತು ವಿದ್ಯಾಭ್ಯಾಸ ಮಾಡಬೇಕಾದ ವಿದ್ಯಾರ್ಥಿಗಳು ಶಿಕ್ಷಕರ ಜೊತೆ ವಾದ ಮಾಡಿ ಬಿಸಿಲಿನಲ್ಲಿಯೇ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ.
 
ಕಳೆದ ಐದಾರು ವರ್ಷಗಳಿಂದ ತಾಲೂಕಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಚಳಿ ಎಲ್ಲಿಂದ ಬರುತ್ತದೆ ಎಂದು ತಿಳಿದ್ದವರೀಗ ಹೊರಗೆ ಬರುತ್ತಿಲ್ಲ. ಒಂದು ವೃಳೆ ಹೊರಗೆ ಬಂದರೂ ಮಧ್ಯಾಹ್ನ 12 ಗಂಟೆ ಮೇಲೆ. ಅದೂ ಮುಖಕ್ಕೆ ಮಫ್ಲರ್‌, ಟವಲ್‌, ದಸ್ತಿ, ಟೋಪಿ ಹಾಗೂ ಕಾಲಿಗೆ ಶೂ ಹಾಕಿಕೊಂಡು ಬರುತ್ತಿದ್ದಾರೆ. ಸಂಜೆ 5 ಗಂಟೆಯಾಗುತ್ತಿದ್ದಂತೆ ಮತ್ತೇ ಮನೆ ಕಡೆ ಮುಖ ಮಾಡಿ ಮನೆಯಲ್ಲಿನ ಕಿಟಕಿ, ಬಾಗಿಲು ಮುಚ್ಚಿಕೊಂಡು ಬೆಚ್ಚಗೆ ಕುಳಿತುಕೊಳ್ಳುತ್ತಿದ್ದಾರೆ. 

ಪಟ್ಟಣಕ್ಕೆ ಸರ್ಕಾರಿ ಕೆಲಸಕ್ಕೆ ಅಥವಾ ವ್ಯಾಪಾರಕ್ಕೆ ತಮ್ಮ ದಿನನಿತ್ಯದ ಕೆಲಸಕ್ಕೆಂದು ಸುತ್ತಮುತ್ತಲಿನ ಅಳ್ಳೊಳ್ಳಿ,
ಸಾತನೂರ, ಹೊಸ್ಸುರ್‌, ದಿಗ್ಗಾಂವ, ಮುಡಬೂಳ, ದಂಡೋತಿ, ರಾವೂರ, ಯರಗಲ್‌, ದಂಡಗುಂಡ, ಸಂಕನೂರ, ಡೋಣಗಾಂವ, ಭೀಮನಳ್ಳಿ ಸೇರಿದಂತೆ ಇತರೆ ಗ್ರಾಮ ಗಳಿಂದ ಬರುವ ಜನರು ಚಳಿಯಿಂದ ರಕ್ಷಿಸಿಕೊಳ್ಳಲು ಹುಲ್ಲು, ಕಟ್ಟಿಗೆ, ಪೇಪರ್‌ಗಳನ್ನು ಬೆಂಕಿ ಹಚ್ಚಿ ಮೈ ಕಾಯಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next