Advertisement

Chitrapur: ಬಾಲಕಿ ಸಮುದ್ರಪಾಲು

12:55 AM Oct 20, 2023 | Team Udayavani |

ಸುರತ್ಕಲ್‌: ಚಿತ್ರಾಪುರ ಬೀಚ್‌ ಬಳಿ ಪ್ರವಾಸಕ್ಕೆಂದು ಬಂದಿದ್ದ ಬಂಟ್ವಾಳ ಇಡ್ಕಿದು ನಿವಾಸಿ ರವಿ ಅವರ ಪುತ್ರಿ ನಿಶಾ (15) ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.
ದಿಗಂತ್‌, ದಿವ್ಯರಾಜ್‌, ಕೀರ್ತನ್‌, ತೇಜಸ್‌, ಆಶ್ಮಿತಾ ಇಲ್ಲಿನ ಚಿತ್ರಾಪುರ ಜೆಟ್ಟಿ ಬಳಿ ಸಮುದ್ರಕ್ಕಿಳಿದಿದ್ದರು. ಏಕಾಏಕಿ ಬೃಹತ್‌ ಅಲೆಗೆ ನಿಶಾ ಮುಳುಗಿದ್ದು, ತತ್‌ಕ್ಷಣ ಸ್ಥಳೀಯರು ನಿಶಾ ಸಹಿತ ಆರು ಮಂದಿಯನ್ನು ಮೇಲಕ್ಕೆಳೆದು ರಕ್ಷಿಸಿದರು.

Advertisement

ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ನಿಶಾ ಬದುಕುಳಿಯಲಿಲ್ಲ. ತೇಜಸ್‌ಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳೂರಿನ ಸಿಟಿ ಸೆಂಟರ್‌ಗೆ ಬಂದಿದ್ದು, ಬಳಿಕ ಬೀಚ್‌ಗೆ ಆಗಮಿಸಿದ್ದರು. ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next