Advertisement

ಚಿತ್ರದುರ್ಗ: ಲಾರಿಗೆ ಬೈಕ್ ಡಿಕ್ಕಿ : ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

11:20 PM Jun 25, 2021 | Team Udayavani |

ಚಿತ್ರದುರ್ಗ: ಬೈಕ್ ಸವಾರ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರ ವಾರಿಯರ್ಸ್ ಶಾಲೆ ಮುಂಭಾಗ ನಡೆದಿದೆ.

Advertisement

ಪರುಶುರಾಮಪುರದ ಭರತ್ (24)ಮತ್ತು ಮಣಿ(20) ಮೃತಪಟ್ಟ ದುರ್ದೈವಿಗಳು.

ಸಿದ್ದಾಪುರ ಗ್ರಾಮದಲ್ಲಿನ ಸಂಬಂಧಿಕರ ಕಾರ್ಯಕ್ರಮ ಮುಗಿಸಿ ವಾಪಸ್ಸು ಪರುಶುರಾಮಪುರ ಗ್ರಾಮಕ್ಕೆ ತೆರಳುವಾಗ ಈ ದುರಂತ ನಡೆದಿದೆ.

ಬಳ್ಳಾರಿಯಿಂದ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ಲಾರಿ ಡಿಕ್ಕಿಯಾಗಿದ್ದು, ಸ್ಥಳಕ್ಕೆ ಆಗಿಮಿಸಿದ ಚಳ್ಳಕೆರೆ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ :ಹೈಕಮಾಂಡ್ ಬುಲಾವ್ : ದಿಢೀರ್ ದೆಹಲಿಗೆ ತೆರಳಿದ ಯೋಗೇಶ್ವರ್

Advertisement
Advertisement

Udayavani is now on Telegram. Click here to join our channel and stay updated with the latest news.

Next