Advertisement

ಕೆರೆಯಲ್ಲಿ ಬಿದ್ದು ಯುವಕ ಸಾವು

05:07 PM Dec 18, 2021 | Team Udayavani |

ಹೊಳಲ್ಕೆರೆ: ಬೈಕ್‌ ಸಹಿತ ಕೆರೆಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಪಟ್ಟಣದಹಿರೆಕೆರೆಯಲ್ಲಿ ಗುರುವಾರ ರಾತ್ರಿ ಜರುಗಿದೆ.ಪಟ್ಟಣದ ಒಂದನೇ ವಾರ್ಡ್‌ನ ತರಕಾರಿ ವ್ಯಾಪಾರಿ ಮಂಜುನಾಥ ಅವರ ಪುತ್ರಅಭಿಷೇಕ್‌ (20) ಮೃತ ದುರ್ದೈವಿ.

Advertisement

ಪಟ್ಟಣದ ದಾವಣಗೆರೆ ರಸ್ತೆಯ ಹಿರೆಕೆರೆಯ ಏರಿಯಮೇಲೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಗುರುವಾರ ರಾತ್ರಿ ಆಕಸ್ಮಿಕವಾಗಿ ಜಾರಿ ಬೈಕ್‌ಸಹಿತ ಕೆರೆಗೆ ಬಿದ್ದಿದ್ದಾನೆ. ಶುಕ್ರವಾರ ಬೆಳಗ್ಗೆ ಬೈಕ್‌ ಕೆರೆ ನೀರಿನಲ್ಲಿ ಕಾಣಿಸಿಕೊಂಡ ಮಾಹಿತಿಪಡೆದ ಪೊಲೀಸ್‌ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಬೈಕ್‌ ಸವಾರ ನೀರಿನಲ್ಲಿ ಬಿದ್ದಿರುವಶಂಕೆ ವ್ಯಕ್ತವಾಗಿತ್ತು.

ಅಗ್ಮಿಶಾಮಕ ದಳದವರನ್ನು ಕರೆಸಿ ಶವ ಮೇಲೆಕ್ಕೆ ತೆಗೆಯಲಾಗಿದೆ.ಈ ಸಂಬಂಧ ಹೊಳಲ್ಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಭಿಷೇಕ್‌ನಿಧನದಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.ಹೊಳಲ್ಕೆರೆ ಸುತ್ತಮುತ್ತ ಸುರಿದ ಧಾರಕಾರ ಮಳೆಗೆ ಕೆರೆ ಭರ್ತಿಯಾಗಿದೆ. ಕೆರೆ ಏರಿಗೆತಡೆಗೋಡೆ ನಿರ್ಮಾಣ ಮಾಡಬೇಕಿದ್ದ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷé ವಹಿಸಿದೆ.

ಹಲವಾರು ಅಪಘಾತಗಳು ಕೆರೆ ಏರಿಯ ಮೇಲೆ ನಡೆಯುತ್ತಿದ್ದರೂ ಇಲಾಖೆ ಮಾತ್ರಮೌನಕ್ಕೆ ಶರಣಾಗಿದೆ. ಕೆರೆ ರಸ್ತೆಯಲ್ಲಿ ಸಂಚರಿಸುವ ವಾಹನಗಳ ರಕ್ಷಣೆಗೆ ರಸ್ತೆಯ ಪಕ್ಕದಲ್ಲಿಸೂಕ್ತ ಮಾರ್ಗಸೂಚಿ ಹಾಗೂ ತಡೆಗೋಡೆ ನಿರ್ಮಿಸಿಲ್ಲ. ಇದರಿಂದಾಗಿ ಜನರು ಮಾತ್ರಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next