Advertisement

ನವೀನ್‌ ಗೆಲುವಿನ ಸಾರಥಿಗಳಿಗೆ ಸಿಎಂ ಶ್ಲಾಘನೆ

05:05 PM Dec 18, 2021 | Team Udayavani |

ಚಿತ್ರದುರ್ಗ: ಮುಂಬರುವ ಜಿಲ್ಲಾ ಹಾಗೂತಾಲೂಕು ಪಂಚಾಯಿತಿ ಚುನಾವಣೆಗಳನ್ನುಗಂಭೀರವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಜಿಲ್ಲೆಯ ಶಾಸಕರಿಗೆಸಲಹೆ ನೀಡಿದ್ದಾರೆ.

Advertisement

ಬೆಳಗಾವಿಯಲ್ಲಿ ಶುಕ್ರವಾರ ಸಿಎಂ ಬಸವರಾಜಬೊಮ್ಮಾಯಿ ಅವರು ವಿಧಾನ ಪರಿಷತ್‌ಚುನಾವಣೆಯಲ್ಲಿ ಜಯಗಳಿಸಿದ ಕೆ.ಎಸ್‌.ನವೀನ್‌ ಅವರನ್ನು ಅಭಿನಂದಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲ ಶಾಸಕರು, ಜನಪ್ರತಿನಿಧಿ ಗಳು ಹೆಚ್ಚುಪ್ರವಾಸ ಮಾಡಿ ಸಕ್ರಿಯವಾಗಿ, ಜನಪರವಾಗಿಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.ಚಿತ್ರದುರ್ಗ-ದಾವಣಗೆರೆ ಸ್ಥಳೀಯ ಸಂಸ್ಥೆಯಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್‌.ನವೀನ್‌,ಜನಬಲದ ಮೂಲಕ ಗೆಲವು ಸಾ ಧಿಸಿದ್ದಾರೆ.ಕಾಂಗ್ರೆಸ್‌ ವಾಮ ಮಾರ್ಗದ ಮೂಲಕ ಹಣ ಹಂಚಿಗೆಲವು ಪಡೆಯಲು ಮುಂದಾಗಿದ್ದರು.

ಅಲ್ಲದೇಎಲ್ಲ ಕ್ಷೇತ್ರಗಳಲ್ಲಿ ರಿಯಲ್‌ ಎಸ್ಟೇಟ್‌ ಮೂಲಕ ಹಣಮಾಡಿದವರಿಗೆ ಟಿಕೆಟ್‌ ನೀಡಿ ಗೆಲವು ಪಡೆಯಲುಯತ್ನಿಸಿ ಮುಖಭಂಗ ಅನುಭವಿಸಿದ್ದಾರೆ ಎಂದುಟೀಕಿಸಿದರು. ಚಿತ್ರದುರ್ಗ-ದಾವಣಗೆರೆ ಸ್ಥಳೀಯಸಂಸ್ಥೆಗಳ ಕ್ಷೇತ್ರದ ನೂತನ ವಿಧಾನ ಪರಿಷತ್‌ಸದಸ್ಯರಾಗಿ ಆಯ್ಕೆಯಾಗುವಲ್ಲಿ ಕ್ಷೇತ್ರದ ಶಾಸಕರಪಾತ್ರ ದೊಡ್ಡ ಮಟ್ಟದಲ್ಲಿದೆ. ಪಕ್ಷದ ಸಂಘಟನೆ,ಕಾರ್ಯಕರ್ತರ ಶ್ರಮದಿಂದ ಗೆಲುವು ಲಭಿಸಿದೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next