Advertisement

ಅಭ್ಯರ್ಥಿ ಚುನಾವಣಾ ವೆಚ್ಚಕ್ಕೆ ಹಣ ನೀಡಿದ ಮತದಾರರು!

05:14 PM Dec 07, 2021 | Team Udayavani |

ಚಿತ್ರದುರ್ಗ: ಚುನಾವಣೆಯಲ್ಲಿ ಅಭ್ಯರ್ಥಿಗಳು ಮತದಾರರಿಗೆಹಣದ ಕವರ್‌ ಕೊಟ್ಟು ಮತ ಹಾಕಿಸಿಕೊಳ್ಳುವುದು ಎಲ್ಲರಿಗೂಗೊತ್ತಿರುವ ಸತ್ಯ. ಆದರೆ ಕೆಲವೊಮ್ಮೆ ಅಭ್ಯರ್ಥಿ, ಪಕ್ಷವನ್ನುನೋಡಿ ಮತದಾರರೇ ನೋಟು-ವೋಟು ಕೊಡುವುದನ್ನೂಕಂಡಿದ್ದೇವೆ.

Advertisement

ಇಂಥದ್ದೇ ಘಟನೆ ಚಿತ್ರದುರ್ಗದಲ್ಲೂ ನಡೆದಿದ್ದು, ವಿಧಾನಪರಿಷತ್‌ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಬಿಜೆಪಿಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್‌. ನವೀನ್‌ ಅವರಿಗೆಮತದಾರರಾಗಿರುವ ಗ್ರಾಮ ಪಂಚಾಯಿತಿ ಸದಸ್ಯರುಚುನಾವಣೆ ವೆಚ್ಚಕ್ಕಾಗಿ ಹಣದ ಕವರ್‌ ನೀಡಿದ್ದಾರೆ.

ಚುನಾವಣೆಗೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇರುವಾಗಸೋಮವಾರ ಬೆಳಗ್ಗೆ ಚಿತ್ರದುರ್ಗದಲ್ಲಿರುವ ಕೆ.ಎಸ್‌.ನವೀನ್‌ಅವರ ಮನೆಗೆ ಆಗಮಿಸಿದ ಚಿತ್ರದುರ್ಗ ತಾಲೂಕಿನಸೊಂಡೇಕೊಳ ಹಾಗೂ ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮಪಂಚಾಯಿತಿ ಸದಸ್ಯರು ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದೀರಿ. ನಿಮಗೆ ನೋವಿದೆ.

ಇಂತಹ ಸಂದರ್ಭದಲ್ಲಿ ಮಾನವೀಯತೆಯಿಂದ ವರ್ತಿಸಬೇಕಾಗಿರುವುದು ನಮ್ಮಜವಾಬ್ದಾರಿಯಾಗಿದ್ದು ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದುಹೇಳಿ ಹಣದ ಕವರ್‌ ಕೈಗಿಟ್ಟಿದ್ದಾರೆ.ಇದರಿಂದ ಭಾವುಕರಾದ ಕೆ.ಎಸ್‌. ನವೀನ್‌, ಮತದಾರರಿಗೆಕವರ್‌ ಕೊಡುವುದು ಸಾಮಾನ್ಯ ಆದರೆ ಅಭ್ಯರ್ಥಿಗೆಮತದಾರರು ಕವರ್‌ ನೀಡಿರುವುದು ಮನಸ್ಸು ತುಂಬಿ ಬಂದಿದೆ.

ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಸಾಕು. ಚುನಾವಣೆಯಲ್ಲಿಬೆಂಬಲಿಸಿ ಎಂದು ಕೈಮುಗಿದಿದ್ದಾರೆ.ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್‌,ಭಾರತಿ, ವಿಶಾಲಮ್ಮ, ಮಧುಕುಮಾರ್‌, ಲಕ್ಷ್ಮಮ್ಮ, ಕಲ್ಲಪ್ಪ,ಓಬಮ್ಮ, ಉಮೇಶ, ಜಯಪ್ಪ, ಉಷ, ಶಿವಮ್ಮ, ಮಲ್ಲಮ್ಮ,ಎಂ.ಡಿ.ಜಗದೀಶ್‌, ಗೋವಿಂದನಾಯ್ಕ, ಮಂಜುನಾಥ,ರಾಜಪ್ಪ, ರಂಗಸ್ವಾಮಿ, ರವಿ ಪûಾತೀತವಾಗಿ ನವೀನ್‌ ಅವರಿಗೆಬೆಂಬಲ ಘೋಷಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next