Advertisement

ಮಳೆಹಾನಿ ಪ್ರದೇಶಕ್ಕೆ ಶಾಸಕ ರಘುಮೂರ್ತಿ ಭೇಟಿ

10:41 AM Nov 20, 2021 | Team Udayavani |

ಚಳ್ಳಕೆರೆ: ಕಳೆದ ಸುಮಾರು ಒಂದುವಾರದಿಂದ ನಿರಂತರ ಮಳೆ ಹಿನ್ನೆಲೆಯಲ್ಲಿಇಲ್ಲಿನ ಕಾಟಪ್ಪನಹಟ್ಟಿ, ಸೂಜಿಮಲ್ಲೇಶ್ವರನಗರ ವ್ಯಾಪ್ತಿಯಲ್ಲಿ ಮೂರಕ್ಕೂಹೆಚ್ಚು ಮನೆಗಳು ಕುಸಿದುಬಿದ್ದಿವೆ.ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕಟಿ.ರಘುಮೂರ್ತಿ ಸ್ಥಳಕ್ಕೆ ಭೇಟಿ ನೀಡಿಕುಟುಂಬಗಳಿಗೆ ಸಾಂತ್ವನ ಹೇಳಿದರು.

Advertisement

ನಗರದ ಹೃದಯ ಭಾಗದಲ್ಲಿರುವಸಂತ ಮೈದಾನಕ್ಕೆ ಭೇಟಿ ನೀಡಿದಶಾಸಕರು, ಮಳೆ ಹಿನ್ನೆಲೆಯಲ್ಲಿಮೈದಾನದ ತುಂಬ ನೀರು ನಿಂತು ಕೆಸರುಗದ್ದೆಯಾಗಿದ್ದು ಓಡಾಟ ನಡೆಸುವುದೇಕಷ್ಟವಾಗಿದೆ. ಮೈದಾನದ ಒಳಗೆ ನೀರುಬರದಂತೆ ಬದಲಿ ವ್ಯವಸ್ಥೆ ಮಾಡಬೇಕು.

ಈಗಿರುವ ಕೆಸರನ್ನು ಸಂಪೂರ್ಣವಾಗಿತೆರವುಗೊಳಿಸಲು ಪೌರಾಯುಕ್ತಪಿ.ಪಾಲಯ್ಯ ಅವರಿಗೆ ಸೂಚಿಸಿದರು.ನಗರ ವ್ಯಾಪ್ತಿಯಲ್ಲಿ ಎಲ್ಲ ವಾಡ್‌ìಗಳಿಗೆ ಭೇಟಿ ನೀಡಿ ಶಿಥಿಲಗೊಂಡಮನೆಗಳ ಬಗ್ಗೆ ಮಾಹಿತಿಸಂಗ್ರಹಿಸಬೇಕು. ಮಳೆಗೆ ಹಾನಿಯಾದಮನೆಗಳಿಗೆ ತುರ್ತು ಪರಿಹಾರಕ್ಕಾಗಿ ಕೂಡಲೇ ಜಿಲ್ಲಾ ಧಿಕಾರಿಗಳಿಗೆ ವರದಿನೀಡಿ ತಮ್ಮ ಗಮನಕ್ಕೆ ತಂದರೆ ಪರಿಹಾರತುರ್ತಾಗಿ ಕೊಡಿಸುವ ಭರವಸೆ ನೀಡಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷಬಿ.ಟಿ. ರಮೇಶ್‌ಗೌಡ, ಮುಖಂಡರಾದಆರ್‌. ಪ್ರಸನ್ನಕುಮಾರ್‌, ಟಿ.ಕೃಷ್ಣಮೂರ್ತಿ, ಅಂಜಿನಪ್ಪ, ಫರೀದ್‌ಖಾನ್‌, ಮಾಚಿಪ್ರಭು ವೀರಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next