Advertisement

ಮಂಗಳಮುಖೀಯರೂ ಮುಖ್ಯವಾಹಿನಿಗೆ ಬರಲಿ: ನವೀನ್‌

02:36 PM Sep 11, 2021 | Team Udayavani |

ಚಿತ್ರದುರ್ಗ: ಮಂಗಳಮುಖೀಯರಿಗೂ ಬಾಗಿನ ಅರ್ಪಿಸಿ ಅವರ ಸಂತೋಷದಲ್ಲಿ ಭಾಗಿಯಾಗಬೇಕೆನ್ನುವುದು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆ. ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್‌.ನವೀನ್‌ ಹೇಳಿದರು.

Advertisement

ಕೇಂದ್ರ ಸಾಮಾಜಿಕ ನ್ಯಾಯ ಮತ್ತುಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ನಗರದಬಿಜೆಪಿ ಕಚೇರಿಯಲ್ಲಿ ಗುರುವಾರಮಂಗಳಮುಖೀಯರಿಗೆ ಬಾಗಿನ ‌ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಎಲ್ಲಾ ವರ್ಗದ ‌ಜನರಿಗೂ ಸಮಾನತೆ ಸಿಗಬೇಕೆನ್ನುವುದು ಬಿಜೆಪಿ ಧ್ಯೇಯ.

ಬಿಜೆಪಿ ಸರ್ಕಾರ ‌ಮಂಗಳಮುಖೀಯರಿಗೂ ಉತ್ತಮ ಪ್ರಶಸ್ತಿ ನೀಡಿ ಗೌರವಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿಮಾತನಾಡಿದರು. ಜಿಲ್ಲಾ ಪ್ರಧಾನಕಾರ್ಯದರ್ಶಿ ಜೈಪಾಲ್‌, ರಾಜೇಶ್‌ಬುರುಡೆಕಟ್ಟೆ, ಸುರೇಶ್‌ ಸಿದ್ದಾಪುರ,ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶೈಲಜಾರೆಡ್ಡಿ, ಯುವ ‌ ಮುಖಂಡ ‌ ಡಾ| ಸಿದ್ದಾರ್ಥ ಗುಂಡಾರ್ಪಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‌ ಯಾದವ್‌, ಎಸ್‌.ಆರ್‌.ಗಿರೀಶ್‌, ದಗ್ಗೆ ಶಿವಪ್ರಕಾಶ್‌, ಎ. ರೇಖಾಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next