Advertisement

ಸುಶಿಕ್ಷಿತರಿಂದಲೇ ರಸ್ತೆ ಒತ್ತುವರಿ ಸರಿಯೇ?: ತಿಪ್ಪಾರೆಡ್ಡಿ

06:48 PM Jan 28, 2022 | Team Udayavani |

ಚಿತ್ರದುರ್ಗ: ನಗರ ವ್ಯವಸ್ಥಿತವಾಗಿ ಬೆಳೆಯಬೇಕು. ಆದರೆಅನೇಕ ಬುದ್ಧಿವಂತರೇ ಒತ್ತುವರಿ ಮಾಡುತ್ತಾರೆ. ತುರ್ತುಸಂದರ್ಭದಲ್ಲಿ ಆಂಬ್ಯುಲೆನ್ಸ್‌ ಕೂಡ ಹೋಗದಂತೆ ರಸ್ತೆಇಕ್ಕಟ್ಟು ಮಾಡಿದ್ದಾರೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿಬೇಸರ ವ್ಯಕ್ತಪಡಿಸಿದರು.ನಗರದ ದಫೇದಾರ್‌ ನಾರಾಯಣಪ್ಪ ಬಡಾವಣೆಯಲ್ಲಿನಗರಾಭಿವೃದ್ಧಿ ಪ್ರಾ ಧಿಕಾರದಿಂದ ನಿರ್ಮಿಸಿರುವ ಸೈನಿಕ ಪಾರ್ಕ್‌ಉದ್ಘಾಟಿಸಿ ಅವರು ಮಾತನಾಡಿದರು.

Advertisement

ನಗರದಲ್ಲಿ ಸುಮಾರು400 ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ.ಮುರುಘಾ ಮಠದ ಮುಂದಿನ ಕೆರೆ ಅಭಿವೃದ್ಧಿಗೆ ಯೋಜನೆರೂಪಿಸಲಾಗಿತ್ತು. ಆದರೆ ನೀರು ತುಂಬಿದೆ. ಈ ನೀರನ್ನುಮಠದ ಹಿಂದಿರುವ ಕೆರೆಗೆ ಹರಿಸಿ ಅಭಿವೃದ್ಧಿ ಮಾಡಲುಅ ಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎಂದರು.

ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್‌ಪಾರ್ಕ್‌ ಸೇರಿದಂತೆ ಹಲವು ಪಾರ್ಕುಗಳನ್ನುಅಭಿವೃದ್ಧಿಗೊಳಿಸಲಾಳಿಸಲಾಗಿದೆ. ನಗರೋತ್ಥಾನಯೋಜನೆಯ ನಾಲ್ಕನೇ ಹಂತದಲ್ಲಿ ಮತ್ತೆ 40 ಕೋಟಿ ರೂ.ಮಂಜೂರಾಗಿದೆ ಎಂದು ತಿಳಿಸಿದರು.

ಹೊಸದಾಗಿ ನಿರ್ಮಾಣ ಮಾಡಿರುವ ಸೈನಿಕ ಪಾಕ್‌ìನಲ್ಲಿ ಗಿಡ-ಮರಗಳಿಗೆ ನಿರು ಹಾಯಿಸಲು ಕೊಳವೆ ಬಾವಿಬೇಕು ಎಂಬ ಮನವಿಗೆ ಸ್ಪಂದಿಸಿದ ಶಾಸಕರು, ಸ್ಥಳದಲ್ಲೇಅಧಿ ಕಾರಿಗಳಿಗೆ ಸೂಚನೆ ನೀಡಿ ಕೊಳವೆಬಾವಿ ಹಾಕಿಸಲುಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next