Advertisement

ಚಿತ್ರದುರ್ಗದಲ್ಲಿ ಭೀಕರ ಅಪಘಾತ : 2 ಸಾವು, ಮೂವರು ಗಂಭೀರ 

10:26 AM Apr 14, 2018 | |

ಚಿತ್ರದುರ್ಗ: ಹಿರಿಯೂರಿನ ಯರಬಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150(ಎ) ರಲ್ಲಿ  ಶನಿವಾರ ಬೆಳ್ಳಂಳೆಳಗ್ಗೆ ಕಾರಿಗೆ ಲಾರಿ ಢಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ  ಗಾಯಗೊಂಡಿದ್ದಾರೆ. 

Advertisement

ಮೃತರು ಕಾರಿನಲ್ಲಿ ತೆರಳುತ್ತಿದ್ದ ತುಮಕೂರು ಮೂಲದ ಶಬಾನ ಅಫೀಸ್‌(50)ಮತ್ತು ಅಜ್ಮಲ್‌ ಪಾಷಾ (32) ಎಂದು ತಿಳಿದು ಬಂದಿದೆ. ಬಳ್ಳಾರಿಯಿಂದ ತುಮಕೂರಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. 

ಗಾಯಾಳುಗಳನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next