Advertisement

ಚಿತ್ರದುರ್ಗ: ಭೀಕರ ಅಪಘಾತ; ದೇಹದಿಂದ ಬೇರ್ಪಟ್ಟ ತಲೆ

09:39 AM Apr 10, 2021 | Team Udayavani |

ಚಿತ್ರದುರ್ಗ: ಚಳ್ಳಕೆರೆ ಸಮೀಪದ ಬುಡ್ನಹಟ್ಟಿ ಬಳಿ ರಾಷ್ಟೀಯ ಹೆದ್ದಾರಿಯಲ್ಲಿ ಶನಿವಾರ ನಸುಕಿನಲ್ಲಿ ಭೀಕರ ಅಫಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಲಾರಿ‌ ಚಾಲಕನ ದೇಹದಿಂದ ತಲೆಯ ಭಾಗ ಬೇರ್ಪಟ್ಟಿದೆ.

Advertisement

ಬಳ್ಳಾರಿಯಿಂದ ಬರುತ್ತಿದ್ದ ಸಿಮೆಂಟ್ ತುಂಬಿದ್ದ ಲಾರಿ, ಚಳ್ಳಕೆರೆಯಿಂದ ಬಳ್ಳಾರಿಗೆ ಹುಣಸೆ ಹಣ್ಣು ತುಂಬಿಕೊಂಡು ಹೊಗುತ್ತಿದ್ದ ಮತ್ತೊಂದು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ‌‌.

ಘಟನೆಯಲ್ಲಿ ಅಂಧ್ರಪ್ರದೇಶದ  ಅನಂತಪುರ ಜಿಲ್ಲೆಯ ಪೆನ್ನಗೊಂಡ ಟೌನ್ ಗೋರಂಡಲ್ ಮಂಡಲ್  ಗುಮ್ಮಯಗಾರಿ ಪಲ್ಲಿ  ಗ್ರಾಮದ ಲಾರಿ ಚಾಲಕ  ಜಗದೀಶ (28) ದೇಹದಿಂದ ತಲೆ ಬೇರ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹುಣಸೇ ಹಣ್ಣು ಲಾರಿ ಚಾಲಕ ತಮಿಳುನಾಡಿನ ಅರೋಕ್ಯಾಸ್ವಾಮಿ (55) ಎರಡು ಕಾಲುಗಳಿಗೆ ಗಾಯಗಳಾಗಿದ್ದು, ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next