Advertisement

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

05:59 PM Apr 13, 2024 | Team Udayavani |

ಚಿತ್ರದುರ್ಗ: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮೋದಿ ನೇತೃತ್ವದಲ್ಲಿ 28 ಸ್ಥಾನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದೇವೆ. ಕಾರಜೋಳ ಗೆಲ್ಲುವುದು ನಿಶ್ಚಿತ ಎಂದು ಚಳ್ಳಕೆರೆ ನಗರದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು.

Advertisement

ನಮಗೆ ಜನರ ಆಶಿರ್ವಾದ ಸಿಗುತ್ತದೆ. 28 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಮೋದಿ ಬೆಂಬಲ ಮತ್ತು ಸಹಕಾರವಿದೆ. ನಾಳೆ ಮೈಸೂರಿನಲ್ಲಿ ಮಾಜಿ ಪ್ರಧಾನಿ ದೇವೆಗೌಡರು, ಮೋದಿ ಇಬ್ಬರೂ ಒಂದೇ ವೇದಿಕೆಯಲ್ಲಿ ಇರುತ್ತಾರೆ. ಕುಮಾರಸ್ವಾಮಿ ಬೆಂಬಲದ ಜೊತೆ ನಾವು 28 ಸ್ಥಾನ ಗೆಲ್ಲುವ ಯತ್ನ ಮಾಡುತ್ತೇವೆ ಎಂದರು.

ಶ್ರೀನಿವಾಸ್ ಪ್ರಸಾದ್ ಜೊತೆ ನಾನು ಮಾತನಾಡಿದ್ದೇನೆ. ಅವರು ಕೂಡಾ ಮೈಸೂರು ಕಾರ್ಯಕ್ರಮಕ್ಕೆ ಹೋಗುತ್ತಾರೆ. ನಾಳೆ ನಾನು ಹೋದ ಬಳಿಕ ಅವರ ಬಳಿ ಮಾತನಾಡುವೆ. ಭೇಟಿ ಮಾಡಿ ಅಸಮಾಧಾನ ಸರಿಪಡಿಸುತ್ತೇವೆ. ಶ್ರೀನಿವಾಸ್ ಪ್ರಸಾದ್ ನಮ್ಮ ದೊಡ್ಡ ಶಕ್ತಿ, ಖಂಡಿತ ನಮಗೆ ಸಹಕಾರ ಕೊಡುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next