Advertisement

ಭಗೀರಥರ ಬದುಕು ಮಾದರಿ

01:01 PM May 01, 2020 | Naveen |

ಚಿತ್ರದುರ್ಗ: ಬರಡಾದ ಭೂಮಿಗೆ ಘೋರ ತಪಸ್ಸಿನ ಮೂಲಕ ಗಂಗೆಯನ್ನು ತಂದ ಭಗೀರಥ ಮಹರ್ಷಿಯವರ ಸತತ ಪ್ರಯತ್ನ, ಛಲ, ತಪಸ್ಸು, ಏಕಾಗ್ರತೆ ಯುವ ಪೀಳಿಗೆಗೆ ಸ್ಫೂರ್ತಿ ಎಂದು ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸರಳವಾಗಿ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ತನ್ನ ಪೂರ್ವಜರಿಗೆ ಮೋಕ್ಷ ನೀಡುವ ಉದ್ದೇಶದಿಂದ, ತಾಯಿಯ ಮಾತಿನಂತೆ, ಭಗೀರಥ ಮಹರ್ಷಿ ಗಂಗೆಯನ್ನು ಭೂಮಿಗೆ ತರಲು ತಪಸ್ಸು ಕೈಗೊಂಡರು. ತಮ್ಮ ಸತತ ಪ್ರಯತ್ನ, ತಪಸ್ಸು ಹಾಗೂ ಛಲದಿಂದ ಗಂಗೆಯನ್ನು ಭೂಮಿಗೆ ತಂದು ತನ್ನ ಕುಟುಂಬಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದ ಮಹಾನ್‌ ಪುರುಷರನ್ನು ನಾವಿಂದು ನೆನೆಯಬೇಕು ಎಂದರು.

ಲಾಕ್‌ಡೌನ್‌ ಕಾರಣದಿಂದ ಭಗೀರಥ ಮಹರ್ಷಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌. ನಿಜಲಿಂಗಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾ ಧಿಕಾರಿ ವೈಶಾಲಿ, ಅಲ್ಪಸಂಖ್ಯಾತರ ಕಲ್ಯಾಣಾ ಧಿಕಾರಿ ರೇಖಾ, ಕೆ.ಪಿ. ಗಣೇಶಯ್ಯ, ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಆರ್‌. ಮೂರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next