Advertisement

ಸುಳ್ಳು ಹೇಳುತ್ತಿರುವ ಚಿರಾಗ್‌: ಬಿಜೆಪಿ

01:50 AM Oct 17, 2020 | mahesh |

ಹೊಸದಿಲ್ಲಿ/ಪಟ್ನಾ: ಬಿಹಾರ ಚುನಾವಣೆ ವಿಚಾರದಲ್ಲಿ ಲೋಕಜನಶಕ್ತಿ ಪಕ್ಷದ ನಾಯಕ ಚಿರಾಗ್‌ ಪಾಸ್ವಾನ್‌ ಸುಳ್ಳು ಹೇಳುತ್ತಿದ್ದಾರೆ ಮತ್ತು ಗೊಂದಲ ಮೂಡಿಸುತ್ತಿದ್ದಾರೆ ಎಂದು ಬಿಜೆಪಿ ಶುಕ್ರವಾರ ಆರೋಪಿಸಿದೆ. ಜತೆಗೆ ಆ ಪಕ್ಷದ ಜತೆಗೆ ಯಾವುದೇ ಬಾಂಧವ್ಯ ಇಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ.  “ಎಲ್‌ಜೆಪಿಯ ಜತೆಗೆ ಬಿಜೆಪಿ ಯಾವುದೇ ರೀತಿಯ . ಬಾಂಧವ್ಯ ಹೊಂದಿಲ್ಲ.

Advertisement

ಚಿರಾಗ್‌ ಚುನಾವಣೆ ವಿಚಾರ ದಲ್ಲಿ ಸುಳ್ಳು ಹೇಳಿ ಗೊಂದಲ ಮೂಡಿಸುತ್ತಿದ್ದಾರೆ. ಅವರು ನಡೆಸುವ ರಾಜಕೀಯಕ್ಕೆ ನಮ್ಮ ಬೆಂಬಲವಿಲ್ಲ’ ಎಂದು ಹೇಳಿ ದ್ದಾರೆ. ಜಾಬ್ಡೇಕರ್‌ ಜತೆಗೆ ಉಪಸ್ಥಿತರಿದ್ದ ಪಕ್ಷದ ಮತ್ತೂಬ್ಬ ನಾಯಕ ಭೂಪೇಂದ್ರ ಯಾದವ್‌ ಮಾತನಾಡಿ “ಎಲ್‌ಜೆಪಿ ಇತರ ಪಕ್ಷಗಳ ಮತಗಳನ್ನು ಕಬಳಿಸುತ್ತದೆ’ ಎಂದು ದೂರಿದರು. ಪ್ರಚಾರ: ಬಿಹಾರ ಸಿಎಂ ನಿತೀಶ್‌ ಕುಮಾರ್‌ ಔರಂಗಾಬಾದ್‌, ಗಯಾ, ಜಮುಯ್‌ಗಳಲ್ಲಿ ಹಲವು ಪ್ರಚಾರ ಸಭೆಗಳಲ್ಲಿ ಮಾತನಾಡಿದರು.

23ರಿಂದ ಪ್ರಧಾನಿ ಪ್ರಚಾರ
ಪ್ರಧಾನಿ ಮೋದಿ ಅ.23ರಂದು ಬಿಹಾರದಲ್ಲಿ ಪ್ರಚಾರ ಶುರು ಮಾಡಲಿದ್ದಾರೆ. ಸಿಎಂ ನಿತೀಶ್‌ ಜತೆಗೂಡಿ 12 ರ್ಯಾಲಿ ನಡೆಸಲಿದ್ದಾರೆ. 23ರಂದು ದೆಹ್ರಿ ಎಂಬಲ್ಲಿ ಮೊದಲ ಕಾರ್ಯಕ್ರಮ. ಗಯಾ ಮತ್ತು ಭಾಗಲ್ಪುರ ದಲ್ಲಿ ಮತ್ತೆರಡು ರ್ಯಾಲಿಗಳು ನಡೆಯಲಿವೆ. ಅ.28ರಂದು ಪ್ರಧಾನಿ ದರ್ಭಾಂಗಾ, ಮುಜಾಫ‌ರ್‌ಪುರ್‌, ಪಾಟ್ನಾಗಳಲ್ಲಿ, ನ.1ರಂದು ಛಪ್ರಾ, ಮೊತಿಹಾರಿ ಮತ್ತು ಸಮಷ್ಟಿಪುರ, ನ.3 ರಂದು ಪಶ್ಚಿಮ ಚಂಪಾರಣ್‌, ಸಹಾರ್ಸ, ಫೋರ್ಬ್ ಸಾಂಜ್‌ಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿ ತಮ್ಮ ಭಾಷಣದ ಸಂದರ್ಭದಲ್ಲಿ ನಿತೀಶ್‌ ಅವರೇ ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರಕಟಿಸುವ ಸಾಧ್ಯತೆಗಳಿವೆ. ನಾನು ಪ್ರಧಾನಿ ಮೋದಿ ಅವರ ಹನು ಮಂತನಿದ್ದಂತೆ. ನನ್ನ ಹೃದಯ ಕತ್ತರಿಸಿದರೆ ಅಲ್ಲಿ ಪ್ರಧಾನಿಯವರ ಚಿತ್ರ ಇರುತ್ತದೆ.
ಚಿರಾಗ್‌ ಪಾಸ್ವಾನ್‌, ಎಲ್‌ಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next