Advertisement

ಗಿಡ ನೆಡಲು ಎಂಥ ಚೈತನ್ಯ

12:26 PM Apr 15, 2017 | Team Udayavani |

ಚಿಂತಾಮಣಿಯ ಕಾಡು ಮಲ್ಲೇಶ್ವರ ಬೆಟ್ಟಕ್ಕೆ ಹೋಗಿದ್ದೀರಾ? ಹೋಗಿ ನೋಡಿ. ಅಲ್ಲಿ ಹಸಿರುವ ನಗುತ್ತಿದ್ದರೆ ಅದಕ್ಕೆ ಕಾರಣ ಈ ವಯೋ ವೃದ್ಧರು.  ವೈಯುಕ್ತಿಕ ಹಿತಾಸಕ್ತಿಗಾಗಿ ಮರ ಗಿಡಗಳನ್ನು ನಾಶಪಡಿಸಲು ಮುಂದಾಗುತ್ತಿರುವ ಈ ದಿನಗಳಲ್ಲಿ ಜೀವನದ ಸಂಧ್ಯಾ ಕಾಲದಲ್ಲಿ ಬೆಟ್ಟಕ್ಕೆ ಹಸಿರು ಹೊದಿಸುತ್ತಿದ್ದಾರೆ.  ನೂರಾರು ಗಿಡಗಳನ್ನು ನೆಟ್ಟು ಮಕ್ಕಳಂತೆ ಪೋಷಿಸುತ್ತಾ ಪರಿಸರ ಪ್ರೇಮವನ್ನು ಮೆರೆಯುತ್ತಿರುವ ಅಪರೂಪದ ವ್ಯಕ್ತಿ ಎಲೆಮರಿ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ.

Advertisement

ಹೆಸರು ಬ್ರಹ್ಮಚೈತನ್ಯ. ಇವರ ವಯಸ್ಸೇನು ಕಡಿಮೆ ಇಲ್ಲ. 73. ಬದುಕಿನ ಮುಸ್ಸಂಜೆ ಇದು. ಸರ್ಕಾರಿ ಸೇವೆಯಿಂದ ನಿವೃತ್ತಿ. ಮಕ್ಕಳೆಲ್ಲರೂ ಸರ್ಕಾರಿ ನೌಕರರಾಗಿದ್ದರೂ ತನ್ನ ಎಲ್ಲಾ ಐಶಾರಾಮಿ ಬದುಕನ್ನು ಬದಿಗಿಟ್ಟು, ನಗರದ ಹೊರವಲಯದಲ್ಲಿರುವ ಕಾಡು ಮಲ್ಲೇಶ್ವರ ಬೆಟ್ಟದಲ್ಲಿ  ಗಿಡ-ಮರಗಳನ್ನು ನೆಟ್ಟು ಪೋಷಿಸುತ್ತಿರುವುದನ್ನು ಕಂಡಾಗ ಅವರ ಹೆಸರಿನಂತೆ ಅವರಲ್ಲಿ ಚೈತನ್ಯ ತುಂಬಿ ಹರಿಯುತ್ತಿರುವುದರ ದ್ಯೋತಕದಂತಿದೆ.

ಬಾಟಲ್‌ಗ‌ಳಲ್ಲಿ ನೀರು

ಕಾಡು ಮಲ್ಲೇಶ್ವರ ಬೆಟ್ಟ ನಗರದಿಂದ ಸುಮಾರು 3-4 ಕಿಮೀ ದೂರವಿದೆ.  ಬ್ರಹ್ಮಚೈತನ್ಯರು ಉರಿ ಬಿಸಿಲನ್ನು ಲೆಕ್ಕಿಸದೇ ಹತ್ತಾರು ನೀರಿನ ಬಾಟಲ್‌ಗ‌ಳಲ್ಲಿ ನೀರನ್ನು ತುಂಬಿಸಿಕೊಂಡು ಹೋಗಿ ಗಿಡಗಳಿ ಆರೈಕೆ ಮಾಡುತ್ತಾರೆ. ಪ್ರತಿ ದಿನ ನೀರು, ರಸಗೊಬ್ಬರ ಮತ್ತು ಗುಣಿ ಅಗೆಯಲು ಬೇಕಾದ ಸಲಕರಣೆಗಳನ್ನು ದಾನಿಗಳು ನೀಡಿರುವ  ಸೈಕಲ್‌ ಮೇಲೆ ತೆಗೆದು ಕೊಂಡು ಹೋಗುತ್ತಾರೆ. 
  ತಪ್ಪುಗಳನ್ನು ತೊಳೆದು ಹಾಕಲು ಗುಡಿ ಗೋಪುರಗಳಿಗೆ ತೆರಳಿ ಪೂಜೆ ಪುನಸ್ಕಾರಗಳನ್ನು ಮಾಡಿಸುತ್ತಾರೆ.  ಆದರೆ ಯಾವೊಬ್ಬ ವ್ಯಕ್ತಿಯು ಒಳ್ಳೆಯ ಕಾರ್ಯಗಳನ್ನು ಮಾಡಿ ತಮ್ಮ ಜೀವನವನ್ನು ಸ್ಪೂರ್ತಿ ಮಯಗೊಳಿಸಲು ಮುಂದಾಗುವುದಿಲ್ಲ. ಆದ್ದರಿಂದಲ್ಲೆ ನಾನ್ನುಗಿಡ ಮರಗಳ ಪೋಷಣೆಗಿಂತ ಬೆರೊಂದು ಉತ್ತಮ ಕಾರ್ಯವಿಲ್ಲ ಎಂದು ಭಾವಿಸಿದ್ದೇನೆ ಎನ್ನುತ್ತಾರೆ ಬ್ರಹ್ಮಚೈತನ್ಯ.

ತೇವಾಂಶ ತಡೆಯಲು ಹೊಸ ವಿಧಾನ 

Advertisement

ಬಿಸಿಲಿನ ಬೇಗೆಗೆ ಭೂಮಿಯ ತೇವಾಂಶ ಕಡಿಮೆಯಾಗುತ್ತದೆ. ಅದಕ್ಕೆ ಬ್ರಹ್ಮಚೈತನ್ಯ ಹೊಸ ಐಡಿಯಾ ಹುಡುಕಿದ್ದಾರೆ. ಗಿಡಿದ ಬುಡದಿಂದ ಆರ್ಧ ಅಡಿ ದೂರದಲ್ಲಿ ರಂಧ್ರಗಳನ್ನು ಕೊರೆದ  ಪ್ಲಾಸ್ಟಿಕ್‌ ಡಬ್ಬವನು ಹೂತಿಟ್ಟಿದ್ದಾರೆ. ಒಂದೊಂದೆ ಹನಿಯಾಗಿ ಸೋರುವುದರಿಂದ ಪ್ರತಿ ದಿನ ಗಿಡದ ಬೇರುಗಳಿಗೆ ತೇವಾಂಶ ಸಿಗುವುದರಿಂದ ಗಿಡವು ಬೆಳವಣಿಗೆ ಉತ್ತಮವಾಗುತ್ತದೆ ಎನ್ನುವುದು ತಂತ್ರ.  ಏನೇ ಆಗಲೀ ರಾಮಾ ಕೃಷ್ಣ ಅನ್ನೋ ವಯಸ್ಸಲ್ಲಿ ಮರೆಯದ ಸೇವೆ. 

ಕೆ. ಶ್ರೀನಿವಾಸ

Advertisement

Udayavani is now on Telegram. Click here to join our channel and stay updated with the latest news.

Next