Advertisement

ಚಿಂತಾಮಣಿ: ಬೆಳಗದ ಬೀದಿ ದೀಪ

05:13 PM Aug 08, 2021 | Team Udayavani |

ಚಿಂತಾಮಣಿ: ನಗರದ ಪಿ.ಸಿ.ಆರ್‌. ಕಾಂಪ್ಲೆಕ್ಸ್‌ನಿಂದ ನಗರಸಭೆ ವೃತ್ತದವರೆಗೂ ಬೀದಿ ದೀಪಗಳುಕೆಟ್ಟು ಹೋಗಿದ್ದು, ಜನ ಕಗ್ಗತ್ತಲಲ್ಲಿ ಓಡಾಡುವಂತಾಗಿದೆ. ನಗರದ ಜೋಡಿ ರಸ್ತೆಯಲ್ಲಿ ಮುಂಜಾನೆ 5ರಿಂದ ರಾತ್ರಿ11 ಗಂಟೆಯವರೆಗೂ ಜನ, ವಾಹನ ಸಂಚಾರ ಹೆಚ್ಚಿರುತ್ತದೆ.
ಅದರಲ್ಲೂ ಪಿ.ಸಿ.ಆರ್‌. ಕಾಂಪ್ಲೆಕ್ಸ್‌ನಿಂದ ನಗರದ ಕನ್ನಂಪಲ್ಲಿಯವರೆಗಿನ ರಸ್ತೆ ಜನ ಜಂಗುಳಿಯಿಂದ ಕೂಡಿರುತ್ತೆ. ಇಂತಹ ರಸ್ತೆಯಲ್ಲೇ ಬೀದಿ ದ್ವೀಪಗಳು ಬೆಳಗುತ್ತಿಲ್ಲ, ಇದು ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ನಗರದಲ್ಲಿ ಇತ್ತೀಚಿಗೆ ಕಳ್ಳರ ಕಾಟ ಹೆಚ್ಚಾಗಿ ಸರಗಳ್ಳತನ, ಮನೆ, ಅಂಗಡಿ ಮಳಿಗೆಗಳ ದರೋಡೆ ಹೆಚ್ಚಾಗಿದೆ. ಚಿಂತಾಮಣಿ ನಗರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಪೊಲೀಸ್‌ ಇಲಾಖೆ ನಗರದ ಹಲವೆಡೆ ಸಿಸಿ ಕ್ಯಾಮೆರಾ ಸಹ ಅಳವಡಿಸಿದೆ. ಸಂಜೆ ವೇಳೆ ಬೀದಿ ದ್ವೀಪ ಬೆಳಗದ ಪರಿಣಾಮ ಅಪರಾಧ ಕೃತ್ಯಗಳು ಮತ್ತೆ ಪ್ರಾರಂಭ ಆಗುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ:ಯಾವುದರಲ್ಲಿ ಹೊಡಿತಾರೋ ಅದರಲ್ಲಿಯೇ ಹೊಡೆದು ಒಂದಕ್ಕೆ ಎರಡು ತೆಗೆದುಬಿಡಿ: ಈಶ್ವರಪ್ಪ

ನಗರದಲ್ಲಿ ಎಲ್ಲವೂ ಸರಿ ಇದೆ ಎಂದು ಬೀಗುವ ನಗರಸಭೆ ಅಧಿಕಾರಿಗಳು ಮುಖ್ಯರಸ್ತೆಯಲ್ಲಿ 20 ದಿನಗಳಿಂದ ಬೀದಿ ದ್ವೀಪಗಳು ಬೆಳಗದಿದ್ದರೂ ಅದರ ಕಡೆ ಗಮನ ಹರಿಸಿಲ್ಲ. ಇದು ಅಧಿಕಾರಿಗಳ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ರಾತ್ರಿ ವೇಳೆ ಬೆಂಗಳೂರು ವೃತ್ತದಿಂದ ತಾಲೂಕು ಕಚೇರಿವರೆಗೂ ಸಂಚರಿಸಲು ಬಹಳ ಕಷ್ಟವಾಗಿದೆ.ಸಂಬಂಧಪಟ್ಟಅಧಿಕಾರಿಗಳು ಶೀಘ್ರ ಬೀದಿ ದ್ವೀಪ ದುರಸ್ತಿ ಮಾಡಬೇಕು. ಮೂರು ದಿನಗಳಿಂದ ದುರಸ್ತಿ ಕಾರ್ಯ ಪ್ರಾರಂಭಿಸಿದರೂ ಅಲ್ಲಲ್ಲಿ ಮಾತ್ರ ದೀಪಗಳು ಹುರಿಯುತ್ತಿದ್ದು, ಉಳಿದ ಕಡೆ ಕತ್ತಲು ಆವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next