Advertisement

ಗಡಿ ಗ್ರಾಮಕ್ಕೆ ಚೀನಾ ಪಡಿತರ

06:00 AM Oct 06, 2018 | |

ಪಿತ್ತೋರ್‌ಗಡ (ಉತ್ತರಾಖಾಂಡ): ಉತ್ತರಾಖಂಡ ಸರ್ಕಾರ ಹಳ್ಳಿಗಳ ಬಗ್ಗೆ ವಹಿಸುತ್ತಿರುವ ನಿರ್ಲಕ್ಷ್ಯದ ಪರಿಣಾಮ, ಭಾರತ-ನೇಪಾಳ ಗಡಿ ಬಳಿಯಿರುವ ಹಳ್ಳಿಗಳ ಜನ ತಮ್ಮ ದಿನನಿತ್ಯದ ಊಟ, ತಿಂಡಿಗಾಗಿ ನೆರೆರಾಷ್ಟ್ರ ಚೀನಾ, ನೇಪಾಳದ ಮೇಲೆ ಅವಲಂಬಿಸಿರುವ ಪರಿಸ್ಥಿತಿ ನಿರ್ಮಾಣ ವಾಗಿದೆ.  

Advertisement

ಗಬ್ಯಾìಂಗ್‌, ಬುಂಡಿ, ಗುಂಜಿ, ಕುಟಿ, ನಪಾಲು, ನಭಿ ಹಾಗೂ ರೋಂಕೊಂಡ್‌ ಎಂಬ ಈ ಏಳು ಹಳ್ಳಿಗಳಿಂದ 50 ಕಿ.ಮೀ. ದೂರವಿರುವ ಧಾರ್ಚುಲಾದಿಂದ ಈ ಹಳ್ಳಿಗಳಿಗೆ ದಿನಸಿ ಸರಬರಾಜು ಆಗುತ್ತಿತ್ತು. ಆದರೆ, ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್‌) ಅಡಿಯಲ್ಲಿ ಕುಟುಂಬವೊಂದಕ್ಕೆ 2 ಕಿಲೋ ಅಕ್ಕಿ, 5 ಕಿಲೋ ಗೋಧಿ ನೀಡುತ್ತಿ¤ದ್ದು, ಇದರ ಪ್ರಮಾಣ ಹೆಚ್ಚಿಸುವಂತೆ ಅನೇಕ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇದು ಸಾಲದೆಂಬಂತೆ, ಈ ಹಳ್ಳಿಗಳನ್ನು ಧಾರ್ಚುಲಾ ಊರಿಗೆ ಬೆಸೆಯುವ ಲಿಪುಲೆಖ್‌ ಬೈಪಾಸ್‌ ರಸ್ತೆ ಕೆಲ ತಿಂಗಳುಗಳಿಂದ ಮುಚ್ಚಿಹೋಗಿದ್ದರಿಂದ ಹೇಸರಗತ್ತೆಗಳ ಮೇಲೆ ದಿನಸಿ ತಂದು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ, ಈ ಹಳ್ಳಿಗಳ ಜನ ನೇಪಾಳದ ಟಿಂಕರ್‌, ಚಂಗ್ರು ಎಂಬ ಹಳ್ಳಿಗಳಿಂದ ಚೀನಾ ಉತ್ಪಾದಿತ ಉಪ್ಪು, ಅಕ್ಕಿ, ಗೋಧಿ, ಎಣ್ಣೆ ತರುತ್ತಿದ್ದು, “ನಮ್ಮ ದಿನಸಿಗಿಂತ ಚೀನಾ ದಿನಸಿಯೇ ಅಗ್ಗ’ ಎನ್ನುತ್ತಿದ್ದಾರೆ. ಆದರೆ, ಕಡಿಮೆ ಬೆಲೆಗೆ ನಮ್ಮ ದಿನಸಿಯೇ ಸಿಗುವಂತಾಗಲಿ ಎಂಬುದು ಇವರ ಪ್ರಾರ್ಥನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next