Advertisement

ಚಿಂಚೋಳಿ: ಭಾರಿ ಮಳೆಗೆ ಜನರ ಪರದಾಟ; ರಸ್ತೆ ಸಂಪರ್ಕ ಕಡಿತ

09:44 PM Sep 09, 2022 | Team Udayavani |

ಚಿಂಚೋಳಿ: ತಾಲೂಕಿನ ಅನೇಕ ಗ್ರಾಮಗಳು ಶುಕ್ರವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದ ಕೋಡ್ಲಿ ಗ್ರಾಮದ ಹತ್ತಿರ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದು ಜನರು ಗ್ರಾಮದೊಳಗೆ ಹೋಗಲು ಹರಸಾಹಸ ಪಡಬೇಕಾಯಿತು

Advertisement

ಅಲ್ಲದೆ ಗಡಿಕೇಶ್ವರ, ಭೂತ್ಪೂರ, ಚಿಂತಪಳ್ಳಿ ಗ್ರಾಮಗಳಲ್ಲಿ ನಾಲೆಗಳು ತುಂಬಿ ಹರಿದಿವೆ ರೈತರು ಹೊಲಕ್ಕೆ ಹೋದವರು ತೊಂದರೆ ಪಡಬೇಕಾಯಿತು.ಕೋಡ್ಲಿ ಗ್ರಾಮದ ಮುಖ್ಯದ್ವಾರದ ಅಗಸಿ ಹತ್ರ ಸಣ್ಣ ಹಳ್ಳ ತುಂಬಿ ಹರಿದಿದ್ದು ಶಾಲಾಮಕ್ಕಳು ಗ್ರಾಮದೊಳಗೆ ಹೋಗಲು ತೊಂದರೆ ಅನುಭವಿಸಬೇಕಾಯಿತು.

ದನಕರುಗಳು ನೀರಲ್ಲಿ ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು. ಯಾವುದೇ ವಾಹನಗಳು ಗ್ರಾಮದೊಳಗೆ ಹೋಗಲು ಕಷ್ಟಪಡಬೇಕಾಯಿತು.ಗಡಿಕೇಶ್ವರ ಹತ್ತಿರ ನದಿಯ ನಾಲಾ ತುಂಬಿರದ ರಸ್ತೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿವೆ. ಇದರಿಂದಾಗಿ ಗಡಿಕೇಶ್ವರ್ ಹೊಡೇಬೀರನಳ್ಳಿ ರಸ್ತೆ ಸಂಪರ್ಕ ಕಡಿತವಾಗಿದೆ.ಧಾರಾಕಾರ ಮಳೆ ಸುರಿದ ಮಳೆಯಿಂದ ಕುಕ್ಲೂರು ಭಂಟನಳ್ಳಿ ಗಡಿಕೇಶ್ವರ ಗ್ರಾಮದಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದೆ.

Advertisement

Udayavani is now on Telegram. Click here to join our channel and stay updated with the latest news.

Next