Advertisement

ಚಿಂಚನಸೂರ “ಕೋಲಿ ರಾಜಕಾರಣ’ಕ್ಕೆ ಟೀಕೆ

12:44 PM Aug 29, 2022 | Team Udayavani |

ಚಿತ್ತಾಪುರ: ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ ಅವರು ರಾಜಕೀಯ ಲಾಭಕ್ಕಾಗಿ ಕೋಲಿ ಸಮಾಜದ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಸಮಾಜದ ಮುಖಂಡ ಬಸವರಾಜ ಚಿಮ್ಮನಹಳ್ಳಿ ಆರೋಪಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರ ಮತಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಕೋಲಿ ಸಮಾಜದವರು ಚಿಂಚನಸೂರ ಮೂರು ಸಲ ಶಾಸಕರಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಶಾಸಕ ಹಾಗೂ ಸಚಿವರಾಗಿದ್ದ ಅವರು ಸಮಾಜಕ್ಕಾಗಿ ಏನನ್ನೂ ಮಾಡಲಿಲ್ಲ. ಕೋಲಿ ಸಮಾಜವನ್ನು ಎಸ್‌ ಟಿಗೆ ಸೇರಿಸುತ್ತೇನೆ ಎಂದು ಸುಳ್ಳು ಭರವಸೆ ಕೊಟ್ಟು ಸಮಾಜದ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೋಲಿ ಸಮಾಜದ ಗೌರವ ಅಧ್ಯಕ್ಷ ಹನಮಂತ ಸಂಕನೂರ್‌ ಅವರು ಮಾತನಾಡಿ, ಚಿಂಚನಸೂರ ಅವರಿಗೆ ರಾಜಕೀಯ ಅ ಧಿಕಾರದ ದಾಹ ಎಷ್ಟಿದೆ ಎಂದರೆ ಸಚಿವರಾಗಿ ಕೆಲಸ ಮಾಡಿದ್ದರೂ ನಿಗಮದ ಅಧ್ಯಕ್ಷರಾಗಿ ಹಾಗೂ ಪತ್ನಿಯನ್ನು ಕೇಂದ್ರ ಆಹಾರ ನಿಗಮದ ನಿರ್ದೇಶಕರನ್ನಾಗಿ ಮಾಡಿಸಿದ್ದಾರೆ. ಸಮಾಜದ ಹೆಸರು ಬಳಸಿಕೊಂಡು ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ ಎಂದು ಆಪಾದಿಸಿದರು.

ಕೋಲಿ ಸಮಾಜದ ತಾಲೂಕು ಅಧ್ಯಕ್ಷ ರಾಮಲಿಂಗ ಬಾನರ್‌, ಗುರುನಾಥ್‌ ಮುದಗಲ್‌ ರಾವೂರ್‌, ಬಸಣ್ಣ ತಳವಾರ, ಭೀಮಣ್ಣ ಹೊತಿನಮಡಿ, ಭೀಮರಾಯ, ಮಲ್ಲಿಕಾರ್ಜುನ ಸಂಗಾವಿ, ಮಹದೇವ ಇಟಗಿ, ಪ್ರಭು ಹಲಕಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next