Advertisement

ಸ್ವದೇಶಕ್ಕೆ ಬಂದ ವಿಶ್ವಸುಂದರಿ ಚಿಲ್ಲರ್‌

06:20 AM Nov 27, 2017 | Team Udayavani |

ಮುಂಬಯಿ/ಹೈದರಾಬಾದ್‌: ಪ್ರಸಕ್ತ ವರ್ಷದ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಹರ್ಯಾಣದ ಮಾನುಷಿ ಚಿಲ್ಲರ್‌ ಶನಿವಾರ ರಾತ್ರಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಅಭಿಮಾನಿಗಳು,ಕುಟುಂಬ ಸದಸ್ಯರು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಚಿಲ್ಲರ್‌, “ಅಭಿಮಾನಿ ಗಳು ಹಾಗೂ ದೇಶದ ಜನತೆಯ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಆಭಾರಿ. ನನ್ನನ್ನು ಸ್ವಾಗತಿಸಲೆಂದು ಬಂದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಬಯಸುತ್ತೇನೆ’ ಎಂದಿದ್ದಾರೆ. 

Advertisement

ನಾಳೆ ಹೈದರಾಬಾದ್‌ನಲ್ಲಿ ಭಾಷಣ: ಇಲ್ಲಿ ಇದೇ 28ರಿಂದ ಆರಂಭವಾಗಲಿರುವ ಜಾಗತಿಕ ಉದ್ಯಮಶೀಲತೆ ಸಮಾ ವೇಶ(ಜಿಇಎಸ್‌)ದಲ್ಲಿ 2017ರ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಮಾನುಶಿ ಚಿಲ್ಲರ್‌, ಮಹಿಳಾ ಕ್ರಿಕೆಟ್‌ ತಾರೆ ಮಿಥಾಲಿ ರಾಜ್‌, ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ. “ವುಮನ್‌ ಫ‌ಸ್ಟ್‌: ಪ್ರಾಸ್ಪಾರಿಟಿ ಫಾರ್‌ ಆಲ್‌’ ಎಂಬ ಶೃಂಗದಲ್ಲಿ ಇವರು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ. ಈ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಪುತ್ರಿ ಇವಾಂಕಾ ಟ್ರಂಪ್‌ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next