Advertisement

ಬಾಲ ಕಾರ್ಮಿಕ ಪದ್ಧತಿ ತಡೆ ಅನಿವಾರ್ಯ

04:56 AM Jun 13, 2020 | Lakshmi GovindaRaj |

ಯಳಂದೂರು: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವ ಅನಿವಾರ್ಯ ವಿದೆ. ಇದಕ್ಕೆ ಸಮುದಾಯಿಕ ಬಲ ಬೇಕಾ ಗುತ್ತದೆ. ಇದು ಸಾಮಾಜಿಕ ಜವಾಬ್ದಾರಿ ಯಾಗಬೇಕು ಎಂದು ಸಿವಿಲ್‌ ನ್ಯಾಯಾಧೀಶ ಎನ್‌.ಶರತ್‌ಚಂದ್ರ ತಿಳಿಸಿದರು.

Advertisement

ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಸಾಧನ ಸಂಸ್ಥೆ ಯಿಂದ ನಡೆದ ಬಾಲ ಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆಯ  ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ, 14 ವರ್ಷದೊಳಗಿನ ದುಡಿಯುವ ಎಲ್ಲಾ ಮಕ್ಕಳು ಬಾಲ ಕಾರ್ಮಿಕರಾಗಿದ್ದಾರೆ. ಈ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸ ವಾಗಬೇಕಿದೆ.

ಕೋವಿಡ್‌- 19 ಬಾಲ ಕಾರ್ಮಿಕ ಪದ್ಧತಿಯನ್ನು ಹೆಚ್ಚು  ಮಾಡುವ ಅಪಾಯಗಳಿವೆ. ಪಿಎಸ್‌ಐ ರವಿ ಕುಮಾರ್‌, ವಕೀಲರ ಸಂಘದ ಕಾರ್ಯ ದರ್ಶಿ ಸಿ. ಮಹಾದೇವಸ್ವಾಮಿ, ವಕೀಲ ಎಂ. ಮಾದೇಶ್‌, ಶಿಶು ಅಭಿವೃದಿ ಅಧಿಕಾರಿ ಸಿ. ದೀಪಾ, ಬಾಲ ನ್ಯಾಯ ಮಂಡಲಿ ಸದಸ್ಯ ಟಿ.ಜೆ.  ಸುರೇಶ್‌, ಹರಿ ಶ್ಚಂದ್ರ, ರಂಗಸ್ವಾಮಿ, ಸಾಧನ ಸಂಸ್ಥೆಯ ವೈ.ಕೆ. ಮೋಳೆ ನಾಗರಾಜು, ಸುಧಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next