Advertisement

BBMP ನಿರ್ಲಕ್ಷ್ಯಕ್ಕೆ ಪಾರ್ಕ್‌ನಲ್ಲಿ ಬಾಲಕಿ ಬಲಿ

10:24 AM Aug 13, 2017 | |

ಕೆ.ಆರ್‌.ಪುರ: ಕೆ.ಆರ್‌.ಪುರದ ಆಕಾಶ್‌ ನಗರದ ಎಂವಿಜೆ ಬಡಾವಣೆಯ ಪಾರ್ಕ್‌ನಲ್ಲಿ ಬಿಬಿಎಂಪಿ ತಂದಿಟ್ಟ ಕಬ್ಬಿಣದ ರಾಡ್‌ ಗಳಿಗೆ 13 ವರ್ಷದ ಬಾಲಕಿ ಬಲಿಯಾಗಿದ್ದಾಳೆ. ಆಟವಾಡಲೆಂದು ಉದ್ಯಾನಕ್ಕೆ ತೆರಳಿದ್ದ ಬಾಲಕಿಯ ತಲೆಯ ಮೇಲೆ ರಾಡ್‌ ಬಿದ್ದು ದುರ್ಘ‌ಟನೆ ಸಂಭವಿಸಿದೆ.

Advertisement

ಕೆ.ಆರ್‌.ಪುರ ಸಮೀಪದ ಎಂಟಿಬಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಿಯಾಂಕ(13) ಮೃತ ಬಾಲಕಿ. ಕೃಷ್ಣಪ್ಪ ಲೇಔಟ್‌ ವಾಸಿಗಳಾದ ರಿಯಲ್‌ ಎಸ್ಟೇಟ್‌ ಉದ್ಯಮಿ ಸುಬ್ರಮಣ್ಯಂ ಹಾಗೂ ವಿಜಯ್‌ ಕುಮಾರಿ ದಂಪತಿಯ ಪುತ್ರಿಯಾದ ಪ್ರಿಯಾಂಕ. ಎಂವಿಜೆ ಪಾರ್ಕ್‌ನಲ್ಲಿ ನವೀಕರಣ ಕಾಮಗಾರಿ ಕೈಗೊಂಡಿರುವ ಬಿಬಿಎಂಪಿ, ಪಾರ್ಕ್‌ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಿತ್ತಾದರೂ, ಈ ಬಗ್ಗೆ ಯಾವುದೇ ಕಠಿಣ ಕ್ರಮ ಕೈಗೊಂಡಿ ರಲಿಲ್ಲ. ಹೀಗಾಗಿಯೇ ಶನಿವಾರ ಸಂಜೆ 4ಗಂಟೆ ಸಮಯದಲ್ಲಿ ಪ್ರಿಯಾಂಕ ಉದ್ಯಾನ ವನಕ್ಕೆ ಆಟವಾಡಲು ತೆರಳಿದ್ದಳು. ಅಲ್ಲಿ ಉಯ್ಯಾಲೆ ನಿರ್ಮಿಸಲೆಂದು ತಂದಿಟ್ಟಿದ್ದ ಕಬ್ಬಿಣದ ರಾಡ್‌ಗಳ ಬಳಿ ಪ್ರಿಯಾಂಕ್‌ ಆಟವಾಡುತ್ತಿದ್ದಳು ಎನ್ನಲಾಗಿದೆ. ಆಗ ರಾಡ್‌ವೊಂದು ತಲೆ ಮೇಲೆ ಜೋರಾಗಿ ಬಿದ್ದಿದೆ.

ಗಂಭೀರ ಗಾಯಗೊಂಡ ಬಾಲಕಿಗೆ ತೀವ್ರ ರಕ್ತ ಸ್ರಾವವಾಗಿದೆ. ರಕ್ತದ ಮಡುವಲ್ಲಿ ಬಿದ್ದಿದ್ದ ಬಾಲಕಿಯನ್ನು ಸ್ಥಳೀಯರು ಬೈಯ್ಯಪ್ಪನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ದಿದ್ದಾರೆ. ಆದರೆ, ಅಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಪ್ರಿಯಾಂಕ ಕೊನೆಯುಸಿರೆಳೆದಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next