Advertisement

14 ಅಲೆಮಾರಿ ಕುಟುಂಬ ತವರಿಗೆ

01:00 PM May 07, 2020 | Naveen |

ಚಿಕ್ಕಮಗಳೂರು: ನಗರ ಹಾಗೂ ಸುತ್ತಮುತ್ತ ಕಾಲ್ನಡಿಗೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಹೊಸದುರ್ಗ ಮೂಲದ 14 ಕುಟುಂಬಗಳ ಅಲೆಮಾರಿ ಜನಾಂಗದವರನ್ನು ಅವರ ಊರಿಗೆ ಕೆಎಸ್‌ಆರ್‌ಟಿಸಿ ಬಸ್‌ ಮೂಲಕ ಜಿಲ್ಲಾಡಳಿತ ಬುಧವಾರ ಕಳಿಸಿಕೊಟ್ಟಿದೆ.

Advertisement

ನಗರದ ಹೊರವಲಯದಲ್ಲಿರುವ ಹಿರೇಮಗಳೂರು ರೈಲ್ವೆ ಟ್ರ್ಯಾಕ್‌ ಬಳಿ ಟೆಂಟ್‌ಗಳನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು. ಲಾಕ್‌ಡೌನ್‌ನಿಂದ ವ್ಯಾಪಾರವಿಲ್ಲದೆ ಕಂಗಾಲಾಗಿದ್ದ ಕುಟುಂಬಗಳಿಗೆ ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳು ನೆರವು ನೀಡಿದ್ದವು. ಮೂರನೇ ಲಾಕ್‌ಡೌನ್‌ ನಿರ್ಬಂಧ ಸಡಿಲಗೊಂಡ ಹಿನ್ನೆಲೆಯಲ್ಲಿ ಅವರೆಲ್ಲರೂ ತಮ್ಮ ಊರುಗಳಿಗೆ ತೆರಳಲು ಬಯಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅವರ ಆರೋಗ್ಯ ಪರೀಕ್ಷೆ ನಡೆಸಿ ಎರಡು ಕೆಎಸ್‌ಆರ್‌ಟಿಸಿ ಬಸ್‌ ಗಳ ಮೂಲಕ ಅವರ ಊರುಗಳಿಗೆ ಕಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next