Advertisement

ಚಿಕ್ಕೋಡಿ: ಬಸದಿಯಿಂದ ನಾಪತ್ತೆಯಾದ ಜೈನ ಮುನಿ

08:14 PM Jul 07, 2023 | Team Udayavani |

ಚಿಕ್ಕೋಡಿ: ಜೈನ ಮುನಿಯೊಬ್ಬರು ಇದ್ದಕ್ಕಿದ್ದಂತೆ ಬಸದಿಯಿಂದ ನಾಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿರುವ ನಡೆದಿದೆ.

Advertisement

ಹಿರೇಕೋಡಿಯ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾಗಿದ್ದಾರೆ. ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಆಶ್ರಮದಿಂದ ಮುನಿಗಳು ನಾಪತ್ತೆಯಾಗಿದ್ದು, ಗುರುವಾರ ಬೆಳಗ್ಗೆ 8 ಗಂಟೆಯಿಂದ ಜೈನ ಮುನಿ ನಾಪತ್ತೆಯಾಗಿದ್ದರೆ ಎನ್ನಲಾಗಿದ್ದು, ಬುಧವಾರ ರಾತ್ರಿ 10 ಗಂಟೆಯವರೆಗೆ ಆಶ್ರಮದ ತಮ್ಮ ಕೋಣೆಯಲ್ಲಿಯೇ ಇದ್ದರು ಎಂದು ಭಕ್ತರು ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ ಭಕ್ತರು ಆಶ್ರಮಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಕಾಮಕುಮಾರ ನಂದಿ ಮಹಾರಾಜರು ಕಳೆದ 15 ವರ್ಷಗಳಿಂದ ಹಿರೇಕೋಡಿಯ ಜೈನ ಆಶ್ರಮ ವಾಸವಾಗಿದ್ದರು.

ಆಶ್ರಮದ ಜೈನಮುನಿಗಳು ವಾಸವಿದ್ದ ಕೋಣೆಯಲ್ಲಿಯೇ ಅವರು ಬಳಕೆ ಮಾಡುತ್ತಿದ್ದ ಪಿಂಚಿ, ಕಮಂಡಲು ಹಾಗೂ ಮೊಬೈಲ್ ಪತ್ತೆಯಾಗಿದೆ. ಕಳೆದ 15 ವರ್ಷದಿಂದ ಇದೇ ಆಶ್ರಮದಲ್ಲಿ ಇದ್ದರು ಎಂದು ಮಾಹಿತಿ ಲಭ್ಯವಾಗಿದೆ. ಜೈನ ಮುನಿಗಳು ಒಮ್ಮಿಂದ ಒಮ್ಮೆ ಕಾಣೆಯಾಗಿರುವದು ಶ್ರಾವಕ ಶ್ರಾವಕಿಯಲ್ಲಿ ಆತಂಕ ಮೂಡಿದೆ.ಈ ಕುರಿತಾಗಿ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next