Advertisement

Rabkavi Banhatti ದೇವರ ದಾಸಿಮಯ್ಯ ಹಟಗಾರ ಸಮಾಜದ ಜಗದ್ಗುರು ಅಸ್ತಂಗತ

06:57 PM Sep 26, 2023 | Team Udayavani |

ರಬಕವಿ ಬನಹಟ್ಟಿ : ಅಕ್ಕಲಕೋಟೆಯ ರೇವಣಸಿದ್ಧ ಮಹಾಸಂಸ್ಥಾನ ಮಠದ ಹಾಗೂ ದೇವರ ದಾಸಿಮಯ್ಯ ಹಟಗಾರ ಸಮಾಜದ ಜಗದ್ಗುರು ಚಿಕ್ಕರೇವಣಸಿದ್ಧ ಶಿವ ಶರಣರು(62) ಇಂದು ಅಸ್ತಂಗತರಾದರು. ಶ್ರೀಗಳು ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

Advertisement

ಕಳೆದ ಫೆ.3 ರಂದು ಬನಹಟ್ಟಿಯ ಬೃಹತ್ ವೇದಿಕೆಯಲ್ಲಿ ದೇವರ ದಾಸಿಮಯ್ಯ ಹಟಗಾರ ಸಮಾಜದ ಜಗದ್ಗುರುಗಳಾಗಿ ಪರಮಪೂಜ್ಯ ಶ್ರೀ ಚಿಕ್ಕರೇವಣಸಿದ್ಧ ಶಿವಶರಣರ ಪೀಠಾರೋಹಣ ಕಾರ್ಯಕ್ರಮ, ಕಿರೀಟ ಪೂಜೆ, ಕೈಲಾಸ ಮಂಟಪ ಪೂಜೆ, ಜಗದ್ಗುರುಗಳ ತುಲಾಭಾರ ಕಾರ್ಯಕ್ರಮವು ಇತಿಹಾಸ ನಿರ್ಮಿಸಿತ್ತು.

ಇವರ ಅಗಲಿಕೆಯಿಂದ ಕರ್ನಾಟಕ ಹಾಗು ಮಹಾರಾಷ್ಟ್ರ ರಾಜ್ಯಗಳಲ್ಲಿರುವ ಲಕ್ಷಾಂತರ ಭಕ್ತರು ಕಂಬನಿ ಮಿಡಿದಿದ್ದಾರೆ. ಇವರ ಅಂತ್ಯಕ್ರಿಯೆ ರಾಯಚೂರ ಜಿಲ್ಲೆಯ ಲಿಂಗಸೂರ ತಾಲೂಕಿನ ಗುಡದನಾಳದ ಚಿಕ್ಕ ರೇವಣಸಿದ್ದರ ಮಠದ ಆವರಣದಲ್ಲಿ ಬುಧವಾರ 27ರಂದು ಮುಂಜಾನೆ 8 ಗಂಟೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next