Advertisement

ಆಮ್ಲಜನಕ ನೀಡುವ ಮರ ಕಡಿದ್ರೆ ಮನುಷ್ಯರನ್ನೇ ಕಡಿದಂತೆ

04:33 PM May 06, 2019 | Naveen |

ಚಿಕ್ಕಮಗಳೂರು: ಈಗಿನ ಆಧುನಿಕ ತಂತ್ರಜ್ಞಾನದಲ್ಲಿ ಸ್ಮಾರ್ಟ್‌ ಗ್ರಿಡ್‌ ಬಳಸಿ ವಿದ್ಯುತ್‌ ಸಂರಕ್ಷಿಸಬಹುದು. ವಿದ್ಯುತ್‌ ಸರಬರಾಜಿಗಾಗಿ ಆಮ್ಲಜನಕ ನೀಡುವ ಮರಗಳನ್ನು ಕಡಿಯುವುದು ಮನುಷ್ಯರನ್ನು ಕಡಿದಂತೆಯೇ ಎಂದು ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ| ವಿಶ್ವನಾಥ್‌ ಹೆಗ್ಡೆ ಎಚ್ಚರಿಕೆ ನೀಡಿದರು.

Advertisement

ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್‌ ವಿಭಾಗದಲ್ಲಿ ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರ ಮಟ್ಟದ ‘ಪ್ರಸ್ತುತ ಪರಿಸ್ಥಿತಿಯ ವಿದ್ಯುತ್‌ ಸಮಸ್ಯೆಗಳಿಗೆ ಆಧುನಿಕ ರೀತಿಯಲ್ಲಿ ಬೆಳಕು ಚೆಲ್ಲುವ’ ‘ಈ- ಬೆಳಕು-2019’ ರಾಷ್ಟ್ರ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರವನ್ನು ಹಾಳು ಮಾಡುವುದು ಮನುಷ್ಯ ಧರ್ಮವಲ್ಲ. ಮನುಷ್ಯ ಧರ್ಮವನ್ನು ಪಾಲಿಸದವ ಬುದ್ಧಿವಂತನಲ್ಲ. ಹಾಗಾಗಿ ಯೋಜನೆ ಮತ್ತು ಯೋಚನೆಗಳ ಮುಖಾಂತರ ಆವಿಷ್ಕಾರಗಳನ್ನು ಮಾಡುವುದು ಉತ್ತಮ. ಪ್ರಸ್ತುತ ವಿದ್ಯುತ್‌ ಕ್ಷೇತ್ರದಲ್ಲಿನ ಆಧುನಿಕ ತಾಂತ್ರಿಕ ಆವಿಷ್ಕಾರಗಳ ಬಗ್ಗೆ ಮತ್ತು ವಿದ್ಯುತ್‌ ಸಮಸ್ಯೆ ಮತ್ತು ಪರಿಹಾರಗಳ ವಿಚಾರವಾಗಿ ತಾಂತ್ರಿಕ ಬೆಳವಣಿಗೆೆಯನ್ನು ತಿಳಿಸಿದರು.

ಜೀವನದ ಸಾಧನೆಯ ಹಾದಿಯಲ್ಲಿ ಪಠ್ಯಕ್ರಮವೆಂಬುದು ಇರುವುದಿಲ್ಲ. ನಾವುಗಳು ವಿದ್ಯೆ ಕಲಿಯುವುದು, ಪರೀಕ್ಷೆ ಎದುರಿಸುವುದು ಸಮಾಜಕ್ಕೆ ಮತ್ತು ಪರಿಸರದ ಒಳಿತಿಗೆ. ಹಾಗಾಗಿ ಪಠ್ಯಕ್ರಮದ ಹೊರಗೆ ಯಾವಾಗಲು ಯೋಚಿಸಬೇಕು. ಅಂಕಗಳು ಉದ್ಯೋಗಕ್ಕೆ ಮಾತ್ರವಲ್ಲದೆ ಬುದ್ಧಿಶಕ್ತಿಗೂ ಅಗತ್ಯ ಎಂದು ಹೇಳಿದರು.

ಪ್ರಸ್ತುತ ಭಾರತದಲ್ಲಿ ಎಲ್ಲಾ ಇಂಧನಗಳ ಮೂಲಗಳಿಂದ 377ಗಿಗ ವ್ಯಾಟ್ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. 2024ಕ್ಕೆ 603 ಗಿಗ ವ್ಯಾಟ್‌ನ ಗುರಿ ಇದೆ. ಇನ್ನು 5 ವರ್ಷದ ಬಳಿಕ ಸಾಂಪ್ರದಾಯಿಕ ಇಂಧನಗಳು ನಶಿಸಿ ಹೋಗಿ ಸೋಲಾರ್‌ ಮತ್ತು ಗಾಳಿಯ ಮೂಲಕ ಮಾತ್ರ ವಿದ್ಯುತ್‌ ಉತ್ಪಾದಿಸುವ ಪರಿಸ್ಥಿತಿ ಬರುತ್ತದೆ. ಏನೇ ವಿದ್ಯುತ್‌ ಉತ್ಪಾದಿಸಿದರೂ ಸರಬರಾಜು ಮಾಡಲು ಟ್ರಾನ್ಸ್ಮಿಶನ್‌ ಲೈನ್‌ಗಳ ಕೊರತೆ ಬಹಳಷ್ಟು ಇದೆ ಎಂದು ಹೇಳಿದರು.

Advertisement

ಎಐಟಿ ಕಾಲೇಜಿನ ನಿರ್ದೇಶಕ ಡಾ| ಸಿ.ಕೆ ಸುಬ್ರಾಯ ಮಾತನಾಡಿ, ಸಾಧಕರು ಎಂದರೆ ಸಾಮಾನ್ಯರಲ್ಲ, ಅವರ ಹಿಂದೆ ಬಹಳಷ್ಟು ವರ್ಷಗಳ ಶ್ರಮವಿರುತ್ತದೆ. ತಂದೆ- ತಾಯಿಗಳ, ಗುರು-ಹಿರಿಯರ ಮಾರ್ಗದರ್ಶನದಂತೆ ಸಾಧಕರ ವಿಚಾರಗಳನ್ನು ಅಳವಡಿಸಿಕೊಂಡು ಪ್ರಯತ್ನಗಳನ್ನು ಮಾಡಬೇಕು. ನಮ್ಮ ಕೆಲಸದಲ್ಲಿ ನಮ್ಮದೇ ಆದ ಧೈರ್ಯ, ನಂಬಿಕೆ ಮತ್ತು ಆತ್ಮಸಾಕ್ಷಿಗಳು ಹೆಚ್ಚಿನ ಕೆಲಸಗಳನ್ನು ಮಾಡಿಕೊಡುತ್ತವೆ. ಎಇಸಿಟಿಇ ನೂತನವಾಗಿ ಪ್ರಸ್ತುತ ಪಡಿಸುವ ಹ್ಯಾಖಥಾನ್‌ ಪ್ರೊಗ್ರಾಮ್‌ ಬಗ್ಗೆ ಗಮನ ಹರಿಸಲು ಸೂಚಿಸಿದರು.

ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಪ್ರಿನ್ಸಿಪಾಲ್ ಡಾ| ಸಿ.ಟಿ.ಜಯದೇವ ಮಾತನಾಡಿ, ವಿದ್ಯುತ್‌ ಕ್ಷೇತ್ರ ಎಂಬುದು ಪ್ರಸ್ತುತ ಪರಿಸ್ಥಿತಿಯಲ್ಲಿ ಬಹುಪಯೋಗಿ ಕ್ಷೇತ್ರ. ಇದರ ಸಹಾಯದಿಂದ ಮಾನವನ ಪ್ರತಿಕ್ಷಣಗಳು ಆಧುನೀಕರಣಗೊಂಡು ನಿಶ್ಚಿಂತೆಯಿಂದ ಕೂಡಿದೆ ಎಂದು ತಿಳಿಸಿದರು. ಡಾ| ಬಿ.ಆರ್‌. ವೀರೇಂದ್ರ ಸ್ವಾಗತಿಸಿದರು. ವಿನೋದ್‌ಕುಮಾರ್‌ ಶೇs್ ವಂದಿಸಿದರು. ಅಪೇಕ್ಷ್ಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next