Advertisement

ಕಾಂಗ್ರೆಸ್‌ ಪಕ್ಷ ಸವಕಲು ನಾಣ್ಯ: ಸಿ.ಟಿ.ರವಿ

03:22 PM Dec 26, 2021 | Team Udayavani |

ಚಿಕ್ಕಮಗಳೂರು: ಕಾಂಗ್ರೆಸ್‌ ಪಕ್ಷ ಸವಕಲು ನಾಣ್ಯದಂತಾಗಿದೆ.ಅವರ ನಿಲುವುಗಳೇ ಅವರಿಗೆ ಮಾರಕವಾಗಿವೆ ಎಂದುಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಮುಂದಿನ ಚುನಾವಣೆಯನ್ನು ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್‌, ಪರಮೇಶ್ವರ್‌ಅಥವಾ ಸೋನಿಯಾ ಗಾಂ ಧಿ ನೇತೃತ್ವದಲ್ಲಿ ನಡೆಸಿದರೂ ಅ ಧಿಕಾರಕ್ಕೆ ಬರಲುಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.ಕಾಂಗ್ರೆಸ್‌ ತತ್ವ ಮತ್ತು ನಿಲುವು ಜನಹಿತಕ್ಕೆಮಾರಕ. ಅದು ಕೇವಲ ಓಲೈಕೆಗೆ ಸೀಮಿತವಾಗಿದೆ.

ಈ ಹಿನ್ನೆಲೆಯಲ್ಲಿಅವರಿಗೆ ಹಿನ್ನಡೆಯಾಗುತ್ತದೆ. ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯಅವರು 2016 ರಲ್ಲಿ ಮತಾಂತರನಿಷೇಧ ಕಾಯ್ದೆ ಕರಡಿಗೆ ಸಹಿಹಾಕಿದ್ದಾರೆ. ಇದನ್ನು ಒಪ್ಪದ ಅವರುನಾನು ಸಹಿ ಹಾಕಿಲ್ಲ, ತೋರಿಸಿ ಎಂದರು. ದಾಖಲೆ ಸಹಿತತೋರಿಸಿದಾಗ ನನಗೆ ಗೊತ್ತಿಲ್ಲದೇ ಸಹಿ ಹಾಕಿದ್ದೇನೆ ಎಂದರು.ಹೆಬ್ಬೆಟ್ಟು ಒತ್ತುವವರಾದರೂ ಏನು ಎಂದು ತಿಳಿದುಕೊಂಡೇಹೆಬ್ಬೆಟ್ಟು ಒತ್ತುತ್ತಾರೆ.

ಆದರೆ ಸಿದ್ದರಾಮಯ್ಯ ಗೊತ್ತಿಲ್ಲದೇಸಹಿ ಹಾಕಿದ್ದೇನೆ ಎನ್ನುತ್ತಿರುವುದು ಅವರ ನಾಟಕ ಎಂದುವ್ಯಂಗ್ಯವಾಡಿದರು. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್‌ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ರಾಜಕೀಯ ಪಕ್ಷವಾಗಿ ಪಾದಯಾತ್ರೆ, ಉರುಳುಸೇವೆ ಏನುಬೇಕಾದರೂ ಮಾಡಿಕೊಳ್ಳಲಿ. ಆದರೆ, ಅವರಿಗೆ ಬದ್ಧತೆ ಇಲ್ಲ.ಕೇಂದ್ರದಲ್ಲಿ 2004 ರಿಂದ 2014ರ ವರೆಗೆ ಕಾಂಗ್ರೆಸ್‌ ಸರ್ಕಾರಇತ್ತು. ಆಗ ಏಕೆ ಅನುಮತಿ ನೀಡಲಿಲ್ಲ. ಈಗ ರಾಜಕೀಯನಾಟಕ ಆಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next