Advertisement

ದ್ವೇಷ ರಾಜಕಾರಣ ಬಹಳ ದಿನ ನಡೆಯಲ್ಲ: ಶೋಭಾ

05:09 PM Nov 03, 2021 | Team Udayavani |

ಚಿಕ್ಕಮಗಳೂರು: ದ್ವೇಷದ ರಾಜಕಾರಣ ಬಹಳ ದಿನ ನಡೆಯುವುದಿಲ್ಲಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆಶೋಭಾ ಕರಂದ್ಲಾಜೆ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸಿಂದಗಿ ಮತ್ತು ಹಾನಗಲ್ಲಉಪ ಚುನಾವಣೆ ಫಲಿತಾಂಶಕ್ಕೆ ಪ್ರತಿಕ್ರಿಯಿಸಿದ ಅವರು, ಜನಪ್ರಬುದ್ಧರಾಗಿದ್ದಾರೆ. ನಮ್ಮ ನಡೆ-ನುಡಿಯನ್ನು ಅಳತೆ ಮಾಡುತ್ತಾರೆ.ಇನ್ನಾದರೂ ಜೆಡಿಎಸ್‌ನವರು ಜವಾಬ್ದಾರಿಯಿಂದ ಮಾತನಾಡಲಿ.ಮತದಾರರನ್ನು ಹಗುರವಾಗಿ ಟೇಕನ್‌ ಫಾರ್‌ ಗ್ರಾಂಟೆಂಡ್‌ ಮಾಡಿಕೊಳ್ಳಬಾರದು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಟೀಕೆ ಮಾಡಿದ್ದುಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಯಾವುದೇ ಸಂಘಟನೆಯಹಿನ್ನೆಲೆ-ಮುನ್ನೆಲೆ ತಿಳಿದುಕೊಂಡು ಮಾತನಾಡಬೇಕು. ಓಟ್‌ಬ್ಯಾಂಕ್‌ ರಾಜಕಾರಣ, ಜಾತಿ, ಧರ್ಮದ ಓಲೈಕೆಗಾಗಿ ಆತುರವಾಗಿಮಾತನಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಚುನಾವಣಾ ಫಲಿತಾಂಶನಿದರ್ಶನ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next