Advertisement

ಚಿಕ್ಕಬಳ್ಳಾಪುರ: 5 ಕೋಟಿ 93 ಲಕ್ಷ ತೆರಿಗೆ ವಸೂಲಿ ಗುರಿ

10:17 PM Sep 29, 2020 | Hari Prasad |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರವನ್ನು ರಾಜ್ಯದಲ್ಲಿ ಮಾದರಿ ಮಾಡಲು ಪಣ ತೊಟ್ಟಿರುವ ನಗರಸಭೆಯ ಅಧಿಕಾರಿಗಳು ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡುವ ಜೊತೆಗೆ ನಗರಾಭಿವೃಧ್ಧಿಗಾಗಿ ತೆರಿಗೆ ಸಂಗ್ರಹ ಅಭಿಯಾನವನ್ನು ಆರಂಭಿಸಿದ್ದಾರೆ.

Advertisement

ಚಿಕ್ಕಬಳ್ಳಾಪುರ ನಗರಸಭೆಯ ವ್ಯಾಪ್ತಿಯಲ್ಲಿ 5 ಕೋಟಿ 93 ಲಕ್ಷ ವಸೂಲಿ ಮಾಡುವ ಗುರಿ ಹಾಕಿಕೊಂಡು ಈಗಾಗಲೇ 2 ಕೋಟಿ 60 ಲಕ್ಷ ರೂಗಳು ಸಂಗ್ರಹ ಮಾಡುವುದರಲ್ಲಿ ನಗರಸಭೆಯ ಪೌರಾಯುಕ್ತ ಲೋಹಿತ್ ಅವರ ನೇತೃತ್ವದ ನಗರಸಭೆಯ ಅಧಿಕಾರಿಗಳ ತಂಡ ಸಫಲವಾಗಿದೆ ನಗರದ 27ನೇ ವಾರ್ಡಿನಲ್ಲಿ ತೆರಿಗೆ ವಸೂಲಿ ಅಭಿಯಾನ ನಡೆಸಿ ಸುಮಾರು 4 ಲಕ್ಷ ರೂಗಳನ್ನು ಸಂಗ್ರಹ ಮಾಡಿದ್ದಾರೆ.

ಮೂರು ಮನೆಗಳ ನೀರು ಸಂಪರ್ಕ ಕಡಿತ: ನಗರದ 27ನೇ ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ತೆರಿಗೆ ಅಭಿಯಾನ ನಡೆಸಿ ತೆರಿಗೆ ಪಾವತಿಸದ ನಾಗರಿಕರಿಗೆ ನೋಟಿಸ್ ಜಾರಿಗೊಳಿಸಿ ನೀರು ಶುಲ್ಕವನ್ನು ಪಾವತಿಸದ ಮೂರು ಮನೆಗಳ ನೀರಿನ ಸಂಪರ್ಕ ಕಡಿತಗೊಳಿಸಿ ಶಾಕ್ ನೀಡಿದ್ದಾರೆ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಮಾತ್ರವಲ್ಲದೇ, ನೀರಿನ ಶುಲ್ಕ ಹಾಗೂ ಆಸ್ತಿ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಿ ನಗರಾಭಿವೃಧ್ಧಿಗೆ ಸಹರಿಕರಿಸಬೇಕೆಂದು ನಗರಸಭೆಯ ಪೌರಾಯುಕ್ತ ಡಿ.ಲೋಹಿತ್ ಮನವಿ ಮಾಡಿದ್ದಾರೆ

Advertisement

ನಗರಸಭೆಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ 4 ಕೋಟಿ 58 ಲಕ್ಷ ರೂಗಳು ವಸೂಲಿ ಮಾಡುವ ಗುರಿ ಹೊಂದಿ ಈಗಾಗಲೇ 2 ಕೋಟಿ 10 ಲಕ್ಷ ರೂಗಳು ವಸೂಲಿ ಮಾಡಲಾಗಿದೆ ಕುಡಿಯುವ ನೀರು ತೆರಿಗೆ 1 ಕೋಟಿ 31 ಲಕ್ಷ ರೂಗಳು ವಸೂಲಿ ಮಾಡುವ ಗುರಿ ಹೊಂದಿದ್ದು 50 ಲಕ್ಷ ರೂಗಳು ವಸೂಲಿಯಾಗಿದೆ ಎಂದು ಪೌರಾಯುಕ್ತರು ಉದಯವಾಣಿಗೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಆರ್.ಲತಾ ಅವರ ಮಾರ್ಗದರ್ಶನದಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ಕಸಕಡ್ಡಿಗಳ ವಿಲೇವಾರಿ ಮಾಡಲು ನಗರಸಭೆಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.ಇದರ ಜೊತೆಗೆ ನಗರವನ್ನು ಸ್ವಚ್ಛ ಮತ್ತು ಹಸಿರುಮಯ ಮಾಡಲು ಕಾರ್ಯಪ್ರವೃತರಾಗಿದ್ದಾರೆ.

ರಾಜ್ಯದಲ್ಲಿ ಚಿಕ್ಕಬಳ್ಳಾಪುರ ನಗರವನ್ನು ಮಾದರಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಸೂಚನೆ ಮೇರೆಗೆ ನಗರಸಭೆಯ ವ್ಯಾಪ್ತಿಯಲ್ಲಿ ವಾರ್ಡ್‍ಗಳ ಅಭಿವೃಧ್ಧಿಗಾಗಿ ನಾಗರಿಕ ಸಮಿತಿಗಳನ್ನು ಸಹ ರಚಿಸಿ ಅವರಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆದುಕೊಳ್ಳಲು ನಗರಸಭೆಯ ಅಧಿಕಾರಿಗಳು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next