Advertisement

ಆಕಸ್ಮಿಕ ಬೆಂಕಿ: ಬಣವೆ, ಶೇಂಗಾ ಬೆಳೆ ಭಸ್ಮ

08:03 PM Feb 26, 2021 | Team Udayavani |

ಚೇಳೂರು: ತಾಲೂಕಿನ ವಡ್ಡಿವಾಂಡ್ಲಪಲ್ಲಿ ಗ್ರಾಮದ ರವಣಮ್ಮ ಎಂಬುವರಿಗೆ ಸೇರಿದ ಹುಲ್ಲಿನ ಬಣವೆ ಹಾಗೂ ಶೇಂಗಾ ಬೆಳೆಗೆ ಗುರುವಾರ ಸಂಜೆ ಬೆಂಕಿ ಬಿದ್ದು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದ್ದು, ಸುಮಾರು 45 ಸಾವಿರ ರೂ.ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Advertisement

ಗ್ರಾಮಸ್ಥರು ನೀರು ಹಾಕಿ ನಂದಿಸಿದರಾದರೂ ಪ್ರಯೋಜನ ವಾಗಲಿಲ್ಲ. ಪ.ಜಾತಿಗೆ ಸೇರಿದ ಇವರು ಬಡ ಕುಟುಂಬದವರಾಗಿದ್ದು, ಹುಲ್ಲಿನ ಬಣವೆ, ಶೇಂಗಾ ಬೆಳೆ ನಾಶದಿಂದ ಕಂಗಾಲಾಗಿದ್ದಾರೆ. ಈ ಬಗ್ಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಬೇಕೆಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next