Advertisement

ಚಿಕ್ಕಬಳ್ಳಾಪುರ ಜಿಲ್ಲಾ‌ ಜೆಡಿಎಸ್ ಅಧ್ಯಕ್ಷರಾಗಿ‌ ಕೆ.ಎಂ.ಮುನೇಗೌಡ ನೇಮಕ

04:53 PM Jul 11, 2020 | keerthan |

ಚಿಕ್ಕಬಳ್ಳಾಪುರ: ಸತತ ಎರಡು‌ ವರ್ಷಗಳಿಂದ ತೆರವಾಗಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ‌ ಚಿಕ್ಕಬಳ್ಳಾಪುರದ ಹಾಲಿ ಜಿಪಂ ಸದಸ್ಯರಾದ ವಕೀಲ ಕೆ.ಎಂ.ಮುನೇಗೌಡರನ್ನು ನೇಮಕ ಮಾಡಿ ಜೆಡಿಎಸ್ ವರಿಷ್ಠ, ಮಾಜಿ‌ ಪ್ರಧಾನಿ ಹೆಚ್.ಡಿ.ದೇವೇಗೌಡ ಶನಿವಾರ ಆದೇಶಿಸಿದ್ದಾರೆ.

Advertisement

ಕಳೆದ 2018ರ ವಿಧಾನಸಭಾ ಚುನಾವಣೆ ವೇಳೆ‌ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಕೋಚಿಮುಲ್ ಮಾಜಿ ಅಧ್ಯಕ್ಷ‌ ಕೆ.ವಿ.ನಾಗರಾಜ್ ದಳ ತೊರೆದು ಆಗ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ  ಶಾಸಕರಾಗಿದ್ದ ಸುಧಾಕರ್ ಕಾಂಗ್ರೆಸ್  ಪಕ್ಷಕ್ಕೆ ಕರೆ ತಂದಿದ್ದರು.

ಸತತ‌ ಎರಡು ವರ್ಷಗಳಿಂದ ಜಿಡಿಎಸ್ ಜಿಲ್ಲಾ ಅಧ್ಯಕ್ಷರ ಆಯ್ಕೆ ಆಗಿರಲಿಲ್ಲ. ಈಗ ಹಾಲಿ ಜಿಪಂ ಸದಸ್ಯರಾಗಿರುವ ನಂದಿ ಕ್ಷೇತ್ರದ ಸದಸ್ಯರಾದ ಕೆ.ಎಂ.ಮುನೇಗೌಡರನ್ನು ಪಕ್ಷದ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿ ಶನಿವಾರ ಆದೇಶ ಪತ್ರವನ್ನು ‌ಬೆಂಗಳೂರಿನ ತಮ್ಮ ನಿವಾಸದಲ್ಲಿ ನೀಡಿದರು.

ಈ‌ ಸಂದರ್ಭದಲ್ಲಿ ಚಿಂತಾಮಣಿ ಕ್ಷೇತ್ರದ ಶಾಸಕರಾದ ಜೆಕೆ ಕೃಷ್ಣಾರೆಡ್ಡಿ, ಜಿಪಂ ಸದಸ್ಯ ಕೆ.ಸಿ.ರಾಜಾಕಾಂತ್, ಯುವ ಮುಖಂಡ ಮೇಲೂರು ರವಿಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next